ಅಮ್ಮನ ನಿಗೂಢ ಬಯಲಾಗುವ ಭಯವೇ..? ಸಿಎಂ ಜಯಲಲಿತಾ ನೋಡಲು ಸ್ವಂತ ಸೊಸೆಯನ್ನು ಒಳಬಿಡುತ್ತಿಲ್ಲ ಏಕೆ..!

Published : Oct 06, 2016, 09:02 AM ISTUpdated : Apr 11, 2018, 12:44 PM IST
ಅಮ್ಮನ ನಿಗೂಢ ಬಯಲಾಗುವ ಭಯವೇ..? ಸಿಎಂ ಜಯಲಲಿತಾ ನೋಡಲು ಸ್ವಂತ ಸೊಸೆಯನ್ನು ಒಳಬಿಡುತ್ತಿಲ್ಲ ಏಕೆ..!

ಸಾರಾಂಶ

ಚನ್ನೈ(ಅ.06): ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಆಸ್ಪತ್ರೆ ಸೇರಿ 14 ದಿನಗಳಾದರೂ, ರಕ್ತಸಂಬಂಧಿಗಳಿಗೂ ಅವರನ್ನು ಭೇಟಿ ಆಗುವ ಅವಕಾಶ ದೊರೆತಿಲ್ಲ.

ಜಯಲಲಿತಾ ಅವರ ಅಣ್ಣನ ಮಗಳು ದೀಪಾ ಜಯಕುಮಾರ್‌ಆಸ್ಪತ್ರೆಗೆ ತೆರಳಿದರೂ, ಗೇಟ್‌ದಾಟಲು ಅವಕಾಶ ನೀಡಿಲ್ಲ. 

ಅತ್ತೆ ಅಂದರೆ ನನಗೆ ಬಹಳ ಪ್ರೀತಿ. ಅತ್ತೆಯನ್ನು ನೋಡಲೇ ಬೇಕು. ಆದರೆ, ಆಸ್ಪತ್ರೆಯಲ್ಲಿ ಪ್ರವೇಶ ನಿರಾಕರಿಸಲಾಗಿದೆ ಅಂತ ದೀಪಾ ವ್ಯಕ್ತಪಡಿಸಿದ್ದಾರೆ.

ಎರಡು ವಾರ ಕಳೆದರೂ ಆಸ್ಪತ್ರೆಯಲ್ಲಿ ಜಯಲಲಿತಾ ಅವರನ್ನು ಭೇಟಿ ಆಗಲು ಯಾರೊಬ್ಬರಿಗೂ ಅವಕಾಶ ನೀಡದಿರುವುದು ನಿಗೂಢ ಎನಿಸಿದೆ. 

ಅವರ ಸ್ಥಿತಿ ಗಂಭೀರವಾಗಿರಬಹುದು. ಈ ವಿಷಯವನ್ನು ಏಕೆ ಮುಚ್ಚಿಡುತ್ತಿದ್ದಾರೆ ತಿಳಿಯುತ್ತಿಲ್ಲ. ಈ ಬಗ್ಗೆ ತನಿಖೆ ಆಗಬೇಕು,' ಎಂದು ದೀಪಾ ಹೇಳಿದ್ದಾರೆ. ಜಯಕುಮಾರ್‌ 1995ರಲ್ಲಿ ನಿಧನರಾದಾಗ ಸೋದರಿ ಜಯಲಲಿತಾ ಕುಟುಂಬ ಸದಸ್ಯರನ್ನು ಭೇಟಿ ಆಗಿದ್ದರು.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದೀಪಾ ಸೋದರ ದೀಪಕ್‌ಎಂಬಿಎ ಪದವೀಧರರಾಗಿದ್ದು, ರಿಯಲ್‌ಎಸ್ಟೇಟ್‌ಉದ್ಯಮ ನಡೆಸುತ್ತಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!