ಬಿಜೆಪಿ ಮಣಿಸಲು ತಮಿಳುನಾಡು ಮುಖಂಡನೊಂದಿಗೆ ನಾಯ್ಡು ಮೈತ್ರಿ

By Web DeskFirst Published Nov 8, 2018, 11:41 AM IST
Highlights

ಬಿಜೆಪಿ ಮಣಿಸಲು  ಮಾಸ್ಟರ್ ಪ್ಲಾನ್ ಮಾಡುತ್ತಿರುವ ಚಂದ್ರಬಾಬು ನಾಯ್ಡು ಇದೀಗ ಮತ್ತೋರ್ವ ಪ್ರಭಾನಿ ನಾಯಕನೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ.

ಚೆನ್ನೈ :  ಆಂಧ್ರ ಪ್ರದೇಶ ಮುಖ್ಯಮಂತ್ರಿ ತೆಲುಗು ದೇಶಂ ಪಕ್ಷದ ಮುಖಂಡ ಎನ್. ಚಂದ್ರಬಾಬು ನಾಯ್ಡು ರಾಹುಲ್ ಗಾಂಧಿ ಭೇಟಿ ಬಳಿಕ ಇದೀಗ ಎಲ್ಲಾ ವಿಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. 

ಇದೀಗ ಡಿಎಂಕೆ ಮುಖಂಡ ಸ್ಟಾಲಿನ್ ಅವರನ್ನು ಶುಕ್ರವಾಡ ಮಾತುಕತೆಗೆ ಆಹ್ವಾನಿಸಿದ್ದಾರೆ. ಶುಕ್ರವಾರ ಸಂಜೆ ವೇಳೆ ಸ್ಟಾಲಿನ್ ನಿವಾಸದಲ್ಲಿ ಚಂದ್ರಬಾಬು ನಾಯ್ಡು ಹಾಗೂ ವರು ಮಾತುಕತೆ ನಡೆಸಲಿದ್ದಾರೆ.

ಈ ವೇಳೆ ಹಿರಿಯ ಡಿಎಂಕೆ ಮುಖಂಡ ಎಸ್, ದೊರೈಮುರುಗನ್ ಅವರೂ ಕೂಡ ಹಾಜರಿರಲಿದ್ದಾರೆ. ಈಗಾಗಲೇ ಡಿಎಂ ಬಿಜೆಪಿ ವಿರೋಧಿ ಒಕ್ಕೂಟದಲ್ಲಿ ಸೇರಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿಕೊಂಡಿದೆ. 

click me!