ಐಎಎಸ್ ಅಧಿಕಾರಿ ಮಗಳ ಕಿಡ್ನಾಪ್'ಗೆ ಯತ್ನ; ಬಿಜೆಪಿ ಮುಖ್ಯಸ್ಥನ ಪುತ್ರ ಬಂಧನ

Published : Aug 09, 2017, 07:47 PM ISTUpdated : Apr 11, 2018, 01:02 PM IST
ಐಎಎಸ್ ಅಧಿಕಾರಿ ಮಗಳ ಕಿಡ್ನಾಪ್'ಗೆ ಯತ್ನ; ಬಿಜೆಪಿ ಮುಖ್ಯಸ್ಥನ ಪುತ್ರ ಬಂಧನ

ಸಾರಾಂಶ

ಐಎಎಸ್ ಅಧಿಕಾರಿಯೊಬ್ಬರ ಮಗಳನ್ನು ಹಿಂಬಾಲಿಸಿ ಹಾಗೂ ಕಿಡ್ನಾಪ್ ಮಾಡುವುದಕ್ಕೆ ಪ್ರಯತ್ನಿಸಿದ್ದಕ್ಕಾಗಿ  ಹರ್ಯಾಣ ಬಿಜೆಪಿ ಮುಖ್ಯಸ್ಥ ಸುಭಾಷ್ ಬಾರಲಾ ಪುತ್ರ ವಿಕಾಸ್ ಬಾರಲಾ ಹಾಗೂ ಅವರ ಸ್ನೇಹಿತ ಆಶೀಶ್ ಕುಮಾರನ್ನು ಪೊಲೀಸರು ಬಂಧಿಸಿದ್ದಾರೆ. ಬಿಗಿ ಭದ್ರತೆಯೊಂದಿಗೆ ವಿಕಾಸ್’ರನ್ನು ಕರೆದೊಯ್ಯಲಾಗಿದೆ.

ನವದೆಹಲಿ (ಆ.09): ಐಎಎಸ್ ಅಧಿಕಾರಿಯೊಬ್ಬರ ಮಗಳನ್ನು ಹಿಂಬಾಲಿಸಿ ಹಾಗೂ ಕಿಡ್ನಾಪ್ ಮಾಡುವುದಕ್ಕೆ ಪ್ರಯತ್ನಿಸಿದ್ದಕ್ಕಾಗಿ  ಹರ್ಯಾಣ ಬಿಜೆಪಿ ಮುಖ್ಯಸ್ಥ ಸುಭಾಷ್ ಬಾರಲಾ ಪುತ್ರ ವಿಕಾಸ್ ಬಾರಲಾ ಹಾಗೂ ಅವರ ಸ್ನೇಹಿತ ಆಶೀಶ್ ಕುಮಾರನ್ನು ಪೊಲೀಸರು ಬಂಧಿಸಿದ್ದಾರೆ. ಬಿಗಿ ಭದ್ರತೆಯೊಂದಿಗೆ ವಿಕಾಸ್’ರನ್ನು ಕರೆದೊಯ್ಯಲಾಗಿದೆ.

ನಾಳೆ ಇವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳಾದ ವಿಕಾಸ್ ಬಾರಲಾ ಹಾಗೂ ಅವರ ಸ್ನೇಹಿತರನ್ನು ವಿಚಾರಣೆಗೆ ಕರೆಸಿದ್ದೆವು. ಇದೊಂದು ಸುದೀರ್ಘ ವಿಚಾರಣೆಯಾಗಿತ್ತು. ಇದರಲ್ಲಿ ಹಲವಾರು ವಿಚಾರಗಳು ಹೊರಬಂದಿವೆ. ಹಾಗಾಗಿ ನಾವು ಇವರನ್ನು ಬಂಧಿಸಲು ನಿರ್ಧರಿಸಿದೆವು. ನಾಳೆ ಇವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ತನಿಖೆಯ ಹೆಚ್ಚಿನ ವಿವರಗಳನ್ನು ಇದೀಗಲೇ  ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಡಿಜಿಪಿ ಟಿಎಸ್ ಲೂತ್ರಾ ಹೇಳಿದ್ದಾರೆ.

(ಫೋಟೋ ಕೃಪೆ: ಇಂಡಿಯನ್ ಎಕ್ಸ್'ಪ್ರೆಸ್)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ