ಬಹುಕೋಟಿ ಹಗರಣವೊಂದರ ಆರೋಪದಡಿಯಲ್ಲಿ ಸಿಲುಕಿರುವ ಆರೋಗ್ಯ ಸಚಿವರ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಲ್ಲದೇ ಚೆನ್ನೖನ ವಿವಿಧ ೪೦ ಪ್ರದೇಶಗಳ ಮೇಲೂ ದಾಳಿ ನಡೆಸಲಾಗಿದೆ.
ಚೆನ್ನೈ : ತಮಿಳುನಾಡು ಆರೋಗ್ಯ ಸಚಿವರ ಮನೆ ಮೇಲೆ ಸಿಬಿಐ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ಆರೋಗ್ಯ ಸಚಿವ ಸಿ. ವಿಜಯಾ ಭಾಸ್ಕರ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಬಹುಕೋಟಿ ಗುಟ್ಕಾ ಹಗರಣದ ಆರೋಪ ಎದುರಾಗಿದ್ದು ಈ ನಿಟ್ಟಿನಲ್ಲಿ ದಾಳಿ ನಡೆಸಲಾಗಿದೆ.
ಅಲ್ಲದೇ ಚೆನ್ನೈನ 40 ವಿವಿಧ ಪ್ರದೇಶಗಳ ಮೇಲೆ ದಾಳಿ ನಡೆದಿದ್ದು ಚೆನ್ನೈ ಸಿಟಿ ಪೊಲೀಸ್ ಕಮಿಷನರ್ ಎಸ್. ಜಾರ್ಜ್ ಹಾಗೂ ಮಾಜಿ ಸಚಿವ ರಮಣ ಅವರಿಗೆ ಸೇರಿದ ಪ್ರದೇಶಗಳ ಮೇಲೂ ದಾಳಿ ನಡೆದಿದೆ.
ಈ ಪ್ರಕರಣವನ್ನು ಕಳೆದ ಏಪ್ರಿಲ್ 26 ರಂದು ಸಿಬಿಐಗೆ ವಹಿಸಲು ಮದ್ರಾಸ್ ಹೈ ಕೋರ್ಟ್ ಸೂಚನೆ ನೀಡಿತ್ತು. ಚೆನ್ನೈ ನಲ್ಲಿ 2017ರ ಜುಲೈನಲ್ಲಿ ಬಹುಕೋಟಿ ಮೊತ್ತದ ಗುಟ್ಕಾ ಹಗರಣವು ಬೆಳಕಿಗೆ ಬಂದಿದ್ದು ಇದರಲ್ಲಿ ಭಾರೀ ಪ್ರಮಾಣದಲ್ಲಿ ತೆರಿಗೆ ವಂಚನೆ ಮಾಡಿರುವ ಆರೋಪ ಎದುರಾಗಿತ್ತು.