ದಾಬೋಲ್ಕರ್ ಹತ್ಯೆ: ಹಿಂದುತ್ವ ಸಂಘಟನೆ ಸದಸ್ಯನ ವಿರುದ್ಧ ಚಾರ್ಜ್‌ಶೀಟ್

Published : Sep 10, 2016, 03:40 AM ISTUpdated : Apr 11, 2018, 12:38 PM IST
ದಾಬೋಲ್ಕರ್ ಹತ್ಯೆ: ಹಿಂದುತ್ವ ಸಂಘಟನೆ ಸದಸ್ಯನ ವಿರುದ್ಧ ಚಾರ್ಜ್‌ಶೀಟ್

ಸಾರಾಂಶ

ಕೊಲ್ಹಾಪುರ (ಸೆ.10):  ಆಗಸ್ಟ್ 20, 2013ರಲ್ಲಿ ಪುಣೆಯ ಓಂಕಾರೇಶ್ವರ ದೇಗುಲದ ಬಳಿ ಹತ್ಯೆಯಾದ ವಿಚಾರವಾದಿ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣ ಕುರಿತು ಸುದೀರ್ಘ ತನಿಖೆ ನಡೆಸಿರುವ ಸಿಬಿಐ ಕೊಲ್ಹಾಪುರ ಕೋರ್ಟ್‌ಗೆ 40 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.

ಇಎನ್​ಟಿ ಸ್ಪೆಷಲಿಸ್ಟ್, ಹಿಂದೂ ಜನಜಾಗೃತಿ ಸಮಿತಿ ಸದಸ್ಯ  ವೀರೇಂದ್ರ ತಾವಡೆ  ಪ್ರಕರಣದ ಪ್ರಮುಖ ಆರೋಪಿ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.  ಜೂನ್ 10ರಂದು ಸಿಬಿಐ ವೀರೇಂದ್ರ ತಾವಡೆಯನ್ನು ಬಂಧಿಸಿತ್ತು.ಇನ್ನೂ  ಈತನ ಜೊತೆಗೆ ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್, ಇನ್ನಿಬ್ಬರು ಆರೋಪಿಗಳು. ಸದ್ಯ ಇವರಿಬ್ಬರು ತಲೆಮರೆಸಿಕೊಂಡಿದ್ದಾರೆ. 

ವೀರೇಂದ್ರ ತಾವಡೆ,  ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್  ದಾಬೋಲ್ಕರ್ ಹತ್ಯೆಗೆ ಪ್ಲಾನ್ ಮಾಡಿದ್ದರು. ಮೂವರ ಮಧ್ಯೆ ಹಲವು ಮೇಲ್​ಗಳು ವಿನಿಮಯವಾಗಿವೆ. ಆ ಮೇಲ್​ಗಳಲ್ಲಿ ದಾಬೋಲ್ಕರ್​ರನ್ನು ಧರ್ಮದ್ರೋಹಿ ಎಂದು ಸಂಬೋಧಿಸಿರುವುದನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.   

ಇನ್ನು  ದಾಬೋಲ್ಕರ್ ಹತ್ಯೆಗಾಗಿ ಗನ್ ವ್ಯಾಪಾರಿಗಳನ್ನು ಸಂಪರ್ಕಿಸಿದ್ದರು. ಹಾಗೆ ಸಂಪರ್ಕಿಸಿದ್ದ ಒಬ್ಬ ಗನ್​ ವ್ಯಾಪಾರಿ ಮೂವರೂ ಆರೋಪಿಗಳನ್ನು ಗುರುತಿಸಿದ್ದಾನೆ. ಆದರೆ, ಆರೋಪಿಗಳನ್ನು ಗುರುತಿಸಿರುವ ಗನ್ ವ್ಯಾಪಾರಿ, ಆರೋಪಿಗಳಿಗೆ ಗನ್ ಕೊಟ್ಟಿದ್ದು ತಾನಲ್ಲ ಎಂದು ಹೇಳಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್
ಮಹಿಳೆ ಬಲಿ ಪಡೆದ ಚಿರತೆ ಕೊನೆಗೂ ಸೆರೆ, ದಾಳಿ ಮಾಡಿದ ಅದೇ ಸ್ಥಳದಲ್ಲೇ ಕಾರ್ಯಾಚರಣೆ