ತಮಿಳುನಾಡಿಗೆ ನೀರು ಬಿಡುಗಡೆಗೆ ಸಿಎಂ ಕುಮಾರಸ್ವಾಮಿ ನಿರ್ದೇಶನ

Published : Jun 16, 2018, 08:38 AM IST
ತಮಿಳುನಾಡಿಗೆ ನೀರು ಬಿಡುಗಡೆಗೆ  ಸಿಎಂ ಕುಮಾರಸ್ವಾಮಿ ನಿರ್ದೇಶನ

ಸಾರಾಂಶ

ಉತ್ತಮ ಮುಂಗಾರು ಮಳೆ ಸುರಿಯಬಹುದಾದ ನಿರೀಕ್ಷೆಯಿರುವುದರಿಂದ, ತಮಿಳುನಾಡಿನೊಂದಿಗೆ ಕಾವೇರಿ ನೀರು ಸುಗಮ ಹಂಚಿಕೆಯಾಗಲಿದೆ ಎಂಬ ಭರವಸೆಯಿದೆ. ಹೀಗಾಗಿ ಕಬಿನಿಯಿಂದ 20,000 ಕ್ಯುಸೆಕ್‌ ನೀರು ಬಿಡುಗಡೆ ಮಾಡಲು ಸಿಬ್ಬಂದಿಗೆ ನಿರ್ದೇಶಿಸಿದ್ದೇನೆ ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮದುರೈ: ಉತ್ತಮ ಮುಂಗಾರು ಮಳೆ ಸುರಿಯಬಹುದಾದ ನಿರೀಕ್ಷೆಯಿರುವುದರಿಂದ, ತಮಿಳುನಾಡಿನೊಂದಿಗೆ ಕಾವೇರಿ ನೀರು ಸುಗಮ ಹಂಚಿಕೆಯಾಗಲಿದೆ ಎಂಬ ಭರವಸೆಯಿದೆ. ಹೀಗಾಗಿ ಕಬಿನಿಯಿಂದ 20,000 ಕ್ಯುಸೆಕ್‌ ನೀರು ಬಿಡುಗಡೆ ಮಾಡಲು ಸಿಬ್ಬಂದಿಗೆ ನಿರ್ದೇಶಿಸಿದ್ದೇನೆ ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಇಲ್ಲಿನ ಪ್ರಸಿದ್ಧ ಮೀನಾಕ್ಷಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಇದೇ ರೀತಿ ಮುಂಗಾರು ಮಳೆ ಮುಂದುವರಿದರೆ, ಕಾವೇರಿ ನೀರು ಹಂಚಿಕೆ ಪ್ರಾಧಿಕಾರದ ಆದೇಶದಂತೆ, ಜೂನ್‌ನಲ್ಲಿ ನಾವು ತಮಿಳುನಾಡಿಗೆ ನೀಡಬೇಕಾದ 10 ಟಿಎಂಸಿ ಪಾಲು ನೀಡಬಹುದು ಎಂದು ತಿಳಿಸಿದರು.

ಕುಮಾರಸ್ವಾಮಿಯವರ ನಿರ್ಧಾರಕ್ಕೆ ನಟ, ಮಕ್ಕಳ್‌ ನೀದಿ ಮೈಯ್ಯಂ ಸಂಸ್ಥಾಪಕ ಕಮಲ್‌ ಹಾಸನ್‌ ಸಂತೋಷ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಮುಖ್ಯಮಂತ್ರಿಯವರ ಜೊತೆ ಮಾತನಾಡಿದೆ. ಕಬಿನಿಯಿಂದ ನೀರು ಬಿಡುಗಡೆಗೆ ನನ್ನ ಸಂತೋಷ ವ್ಯಕ್ತಪಡಿಸಿದ್ದೇನೆ. ಅಂತಿಮವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕಾರ್ಯಾರಂಭಿಸಿದರೂ, ಎರಡೂ ರಾಜ್ಯಗಳ ನಡುವಿನ ಒಳ್ಳೆತನ, ಹಲವಾರು ಮುಚ್ಚಲ್ಪಟ್ಟಬಾಗಿಲುಗಳನ್ನು ತೆರೆಯಬಲ್ಲದು ಎಂದು ಕಮಲ್‌ ಟ್ವೀಟ್‌ ಮಾಡಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಕರ್ನಾಟಕಕ್ಕೆ ಆಗಮಿಸಿ, ಅವರನ್ನು ಭೇಟಿಯಾಗಿ ಕಮಲ್‌ ಅಭಿನಂದನೆ ಸಲ್ಲಿಸಿದ್ದರು. ಕಬಿನಿ ನದಿಯಿಂದ 20,000 ಕ್ಯುಸೆಕ್‌ ನೀರು ಬಿಡುಗಡೆಗೆ ನೀರಾವರಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಈ ವರ್ಷ ಉತ್ತಮ ಮಳೆಯಾಗಲಿರುವ ಸಾಧ್ಯತೆ ತುಂಬಾ ಇದೆ.

ಕಬಿನಿಯಿಂದ ನೀರು ಬಿಡುಗಡೆಯಾದಲ್ಲಿ, ಎರಡೂ ರಾಜ್ಯಗಳ ರೈತರಿಗೆ ಲಾಭವಾಗುತ್ತದೆ ಮತ್ತು ಸಂತೋಷವಾಗುತ್ತದೆ. ದೇವರ ದಯೆಯಿಂದ ಉತ್ತಮ ಮಳೆ ಬರುತ್ತಿದೆ ಮತ್ತು ಕಾವೇರಿ ನದಿ ನೀರು ಹಂಚಿಕೆಗೆ ಸುಗಮ ವಾತಾವರಣವಿದೆ. ಕರ್ನಾಟಕದಲ್ಲಿ ನದಿಗಳಿರುವ ಕಡೆ ಉತ್ತಮ ಮಳೆಯಾಗುತ್ತಿದೆ, ಅಣೆಕಟ್ಟುಗಳಿಗೆ ಒಳ್ಳೆಯ ಒಳಹರಿವು ಇದೆ ಎಂದು ಅವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?
ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರೆಡ್ಮಿ ಮಾಸ್ಟರ್‌ ಪಿಕ್ಸೆಲ್‌ ಫೋನ್‌, ಬೆಲೆ ಎಷ್ಟು ಕಡಿಮೆ ಗೊತ್ತಾ?