ಬಿಎಸ್‌'ವೈಗೆ ಬಿಗ್ ಶಾಕ್ ನೀಡಿದ ಎಸಿಬಿ: ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಯಡಿಯೂರಪ್ಪ ಪ್ಲಾನ್

Published : Aug 21, 2017, 08:29 AM ISTUpdated : Apr 11, 2018, 12:46 PM IST
ಬಿಎಸ್‌'ವೈಗೆ ಬಿಗ್ ಶಾಕ್ ನೀಡಿದ ಎಸಿಬಿ: ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಯಡಿಯೂರಪ್ಪ ಪ್ಲಾನ್

ಸಾರಾಂಶ

ಅಕ್ರಮ  ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಎಸಿಬಿ ಎಫ್​​'ಐಆರ್​​ ದಾಖಲಿಸಿ ಬಿಎಸ್'​​ವೈ ಗೆ ಬಿಗ್​ ಶಾಕ್​​ ನೀಡಿದೆ. ಹೀಗಾಗಿ ಬಂಧನ ಭೀತಿಯಿಂದ ತಪ್ಪಿಸ್ಸಿಕೋಳ್ಳಲು ಬಿಎಸ್​ ಯಡಿಯೂರಪ್ಪ ಸೈಲೆಂಟಾಗಿ ಕಾನೂನು ತಂತ್ರವನ್ನ  ಹೆಣೆಯುತ್ತಿದ್ದಾರೆ. ಎಸಿಬಿ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಬೆಂಗಳೂರು(ಆ.21): ಡಿನೋಟಿಪೀಕೇಶನ್​​ ಕೇಸ್​​ ರೀಓಪನ್ ಮಾಡಿ ಎಸಿಬಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪನವರ ಮೇಲೆ ಎಫ್​​ಐಆರ್​​ ದಾಖಲಿಸಿದೆ. ಹೀಗಾಗಿ ಬಿಎಸ್​​ವೈ ಸದ್ಯ ಬಂಧನದ ಭೀತಿಯಲ್ಲಿದ್ದು ಲೋಕಾ ನ್ಯಾಯಾಲಯಕ್ಕೆ  ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಹಾಗೆಯೇ ಎಸಿಬಿ ವಿರುದ್ಧ ಕಾನೂನು ಸಮರ ನಡೆಸಲು ಮುಂದಾಗಿದ್ದಾರೆ.

ಎಸಿಬಿ ದಾಖಲಿಸಿರುವ ಎಫ್​​ಐಆರ್​​ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಇಂದು ನ್ಯಾಯಲಯಕ್ಕೆ ಬರಲಿದೆ. ಹೀಗಾಗಿ  ಬಿಎಸ್​​ ವೈ ಇಂದು  ಲೋಕಾಯುಕ್ತ ವಿಶೇಷ ನ್ಯಾಯಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ಉಳಿದ ಆರೋಪಿಗಳಾದ  ಬಸವರಾಜೇಂದ್ರ, ಪ್ರೇಮಚಂದ್ರ, ಗೌರಿಶಂಕರ್​​, ಸುಬೀರ್​​ ಹರಿಸಿಂಗ್ ಕೂಡ ​​ಇಂದು ಸಂಜೆ ನೀರಿಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಬಸವರಾಜೇಂದ್ರ ಆರೋಪ ಮಾಡಿರೋದ್ರಿಂದ ಎಸಿಬಿ ಅಧಿಕಾರಿಗಳು ಸಹ ಪ್ರಕರಣವನ್ನ ಗಂಭಿರವಾಗಿ ಪರಿಗಣಿಸಿದ್ದಾರೆ. ಪ್ರಕರಣ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Viral Video: ಗಗನಯಾನ್‌ ಮಿಷನ್‌ ಲ್ಯಾಡಿಂಗ್‌ ಪ್ಯಾರಚೂಟ್‌ ಯಶಸ್ವಿ ಪರೀಕ್ಷೆ ನಡೆಸಿದ ಇಸ್ರೋ
ಚಾಮರಾಜನಗರದಲ್ಲಿ 5 ಹುಲಿಗಳ ಹಾವಳಿ: ರೈತರ ಆಕ್ರೋಶ, ಡ್ರೋನ್ ಶೋಧಕ್ಕೆ ಅರಣ್ಯ ಇಲಾಖೆ ಸಿದ್ಧ!