ಯಡಿಯೂರಪ್ಪನವರು ತಮ್ಮ ಸೋಶಿಯಲ್ ಮೀಡಿಯಾ ಇಮೇಜನ್ನು ಬದಲಾಯಿಸಲು ಬೆಂಗಳೂರಿನ ರಾಜನೀತಿ ಎಂಬ ಸಂಸ್ಥೆಗೆ ಫೇಸ್ಬುಕ್ ಮತ್ತು ಟ್ವೀಟರ್ ಅಕೌಂಟ್ ನೋಡಿಕೊಳ್ಳುವ
ಗುತ್ತಿಗೆ ಕೊಟ್ಟಿದ್ದಾರೆ. ಆದರೆ, ಆ ಸಂಸ್ಥೆ ಮಾಡಿದ ಬ್ರೇಕಿಂಗ್ ನ್ಯೂಸ್ ಅವಾಂತರದಲ್ಲಿ ಯಡಿಯೂರಪ್ಪನವರ ಯಾವುದೇ ತಪ್ಪಿಲ್ಲದಿದ್ದರೂ ಅಮಿತ್ ಶಾ ಮುಜುಗರಕ್ಕೂ ಕಾರಣವಾಗಿದೆಯಂತೆ.
ಬೆಂಗಳೂರು (ಮಾ. 20): ಯಡಿಯೂರಪ್ಪನವರು ತಮ್ಮ ಸೋಶಿಯಲ್ ಮೀಡಿಯಾ ಇಮೇಜನ್ನು ಬದಲಾಯಿಸಲು ಬೆಂಗಳೂರಿನ ರಾಜನೀತಿ ಎಂಬ ಸಂಸ್ಥೆಗೆ ಫೇಸ್ಬುಕ್ ಮತ್ತು ಟ್ವೀಟರ್ ಅಕೌಂಟ್ ನೋಡಿಕೊಳ್ಳುವ
ಗುತ್ತಿಗೆ ಕೊಟ್ಟಿದ್ದಾರೆ. ಆದರೆ, ಆ ಸಂಸ್ಥೆ ಮಾಡಿದ ಬ್ರೇಕಿಂಗ್ ನ್ಯೂಸ್ ಅವಾಂತರದಲ್ಲಿ ಯಡಿಯೂರಪ್ಪನವರ ಯಾವುದೇ ತಪ್ಪಿಲ್ಲದಿದ್ದರೂ ಅಮಿತ್ ಶಾ ಮುಜುಗರಕ್ಕೂ ಕಾರಣವಾಗಿದೆಯಂತೆ.
‘ಯಾವುದೇ ಕಾರಣಕ್ಕೂ ನಿಮ್ಮ ಒಪ್ಪಿಗೆ ಇಲ್ಲದೆ ಒಂದು ಅಕ್ಷರ ಕೂಡ ಹೋಗಬಾರದು ಎಂದು ಹೇಳಿ. ಇಲ್ಲವಾದಲ್ಲಿ ಅನಗತ್ಯ ನೆಗೆಟಿವ್ ಪಬ್ಲಿಸಿಟಿ’ ಎಂದು ಅಮಿತ್ ಶಾ ಅವರೇ ಯಡಿಯೂರಪ್ಪಗೆ ಫೋನ್ ಮಾಡಿ ಹೇಳಿದ್ದಾರಂತೆ. ಇಲ್ಲಿಯವರೆಗೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ರಾಜಕೀಯ ಸಂಬಂಧಿ ಪೋಸ್ಟ್ಗಳನ್ನು ಓಕೆ ಮಾಡುತ್ತಿದ್ದರಂತೆ.
-ಪ್ರಶಾಂತ್ ನಾತು
ರಾಜಕಾರಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ