
ನವದೆಹಲಿ: ಸ್ವತಂತ್ರ ಭಾರತದಲ್ಲಿ ನಿರ್ಮಾಣವಾದ ರೈಲ್ವೆ ಮೇಲ್ಸೇತುವೆಗಳಿಗಿಂತ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆಗಳು ಇನ್ನೂ ಹೆಚ್ಚು ಸುಸ್ಥಿತಿಯಲ್ಲಿವೆ ಎಂದು ಸಂಸದೀಯ ಸಮಿತಿಯೊಂದು ವರದಿ ನೀಡಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಿನ ಒಳ ಒಪ್ಪಂದವೇ ಮೇಲ್ಸೇತುವೆಗಳ ಕಳಪೆ ಗುಣಮಟ್ಟಕ್ಕೆ ಕಾರಣ ಎಂದು ವರದಿಯಲ್ಲಿ ದೂಷಿಸಲಾಗಿದೆ.
ಸಾರ್ವಜನಿಕ ಲೆಕ್ಕ ಸಮಿತಿ ಶುಕ್ರವಾರ ಸಂಸತ್ತಿನಲ್ಲಿ ಭಾರತೀಯ ರೈಲ್ವೆ ವಲಯದ ಮೇಲ್ಸೇತುವೆಗಳ ನಿರ್ವಹಣೆ ಕುರಿತು ವರದಿ ಮಂಡನೆ ಮಾಡಿದ್ದು, ಇದರಲ್ಲಿ ರೈಲಿನಲ್ಲಿ ಪ್ರಯಾಣಿಸುವ ಸಾರ್ವಜನಿಕರ ಜೀವಕ್ಕೆ ಆಪತ್ತು ತಂದೊಡ್ಡುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ರೈಲ್ವೆ ಬ್ರಿಡ್ಜ್ಗಳ ನವೀಕರಣಕ್ಕಾಗಿ ಇ ಟೆಂಡರ್ ಕರೆಯಬೇಕು. ಇದರಿಂದ ನಂಬಿಕಸ್ತ ಮತ್ತು ಸ್ಪರ್ಧಾತ್ಮಕವಾದ ಕಂಪನಿಗಳು ಟೆಂಡರ್ನಲ್ಲಿ ಭಾಗಿಯಾಗಲು ಅನುಕೂಲವಾಗುತ್ತದೆ. ಅಲ್ಲದೆ, ರೈಲ್ವೆ ಬ್ರಿಡ್ಜ್ಗಳ ಗುಣಮಟ್ಟಕಾಪಾಡಲು ನೆರವಾಗುತ್ತದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.
ಜತೆಗೆ, ಟೆಂಡರ್ ಪಡೆಯುವ ವೇಳೆ ತಾವು ವಾಗ್ದಾನ ನೀಡಿದಂತೆ ಹೆಚ್ಚು ಕಾಲ ಬಾಳಿಕೆ ಬಾರದ ಮೇಲ್ಸೇತುವ ನಿರ್ಮಿಸುವ ಕಂಪನಿಗಳನ್ನು ಮುಂದಿನ ಟೆಂಡರ್ನಲ್ಲಿ ಭಾಗವಹಿಸಲು ಸಾಧ್ಯವಾಗದಂತೆ, ಅವುಗಳನ್ನು ಡಿಬಾರ್ ಮಾಡಬೇಕು ಎಂದು ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.