
ನವದೆಹಲಿ: ‘ದೇವರು ನಿಮಗಾ ಗಿ ಏನನ್ನಾದರೂ ಕಾದಿರಿಸುತ್ತಾನೆ’. - ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ಮೋಹನ್ ಶಾಂತನಗೌಡರ್ ಅವರ ಪೀಠಕ್ಕೆ 10 ವರ್ಷದ ಬಾಲಕ ನೋರ್ವ ಬರೆದ ಪತ್ರದ ಮೊದಲ ಸಾಲುಗಳಿವು.
ಶನಿವಾರದ ಸುಪ್ರೀಂ ನ್ಯಾಯಾಲಯದ ಕಲಾಪದ ವೇಳೆ ಪುಟ್ಟ ಬಾಲಕನ ಕೃತಜ್ಞತಾ ಪತ್ರವನ್ನು ಓದಿದ ನ್ಯಾಯಾಧೀಶ ಕುರಿಯನ್ ಜೋಸೆಫ್ ಅವರ ಕಣ್ಣಿಂದ ಆನಂದಬಾಷ್ಪ ಹೊರಹೊಮ್ಮಿತ್ತು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ 2011ರಲ್ಲಿ ಪ್ರತ್ಯೇಕಗೊಂಡಿದ್ದ ವಿಭುಲ್ ಎಂಬ ಬಾಲಕನ ಪೋಷಕರು ಪರಸ್ಪರರ ವಿರುದ್ಧ 23 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.
ಕೊನೆಗೆ ಎಲ್ಲ 23 ಪ್ರಕರಣಗಳನ್ನು ಪಾಪಸು ಪಡೆದು ಕೊಂಡು, ಪರಸ್ಪರ ಸಮ್ಮತಿಯ ಮೇರೆಗೆ ವಿಚ್ಛೇದನ ಪಡೆಯಲು ದಂಪತಿ ಸಮ್ಮತಿಸಿದರು. ಈ ಹಿನ್ನೆಲೆಯಲ್ಲಿ ಕೊನೆಗೂ ವಿವಾದ ಬಗೆಹರಿದ ಬಗ್ಗೆ ಸುಪ್ರೀಂ ಕೋರ್ಟ್ಗೆ ಕೃತಜ್ಞತಾ ಪತ್ರ ಬರೆದಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.