
ಮೈಸೂರು (ಮೇ.07): ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ನಡುವೆ ಭಿನ್ನಮತ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಕಾರ್ಯಕರ್ತರೇ ಬಿಜೆಪಿ ನಾಯಕರಿಗೆ ಬ್ಯಾನರ್'ಗಳ ಮೂಲಕ ಬುದ್ದಿಮಾತುಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಬಿಜೆಪಿ ಕಾರ್ಯಕಾರಿಣಿ ನಡೆಯಲಿದ್ದು, ಬೀದಿಬೀದಿಗಳಲ್ಲಿ ಬಿಜೆಪಿ ಮತದಾರರ ವೇದಿಕೆಯಿಂದ ಬ್ಯಾನರ್, ಕಟೌಟ್'ಗಳನ್ನು ಹಾಕಲಾಗಿದೆ.
ಆ ಬ್ಯಾನರ್'ಗಳಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಭಾವಚಿತ್ರ ಒಟ್ಟಿಗೆ ಪ್ರಕಟಿಸಿ ಕಾರ್ಯಕರ್ತರು, ಮತದಾರರ ಮನಸ್ಸು ಅರಿಯಿರಿ ಎಂದು ಉಭಯ ನಾಯಕರಿಗೆ ಸಂದೇಶ ನೀಡಿದ್ದಾರೆ.
ಸಾಧಿಸುವ ಗುರಿ ಹಾಗೂ ಓಡುವ ಛಲವಿರುವಾಗ ಎದೆಯಲ್ಲಿ ಸಂತೋಷವಿದ್ದರೆ ವಿಜಯ ನಿಶ್ಚಿತ, 'ಸಂತೋಷ' ಇರಲಿ ಜಗಳ ಬೇಡ ಎಂಬ ಸಂದೇಶಗಳನ್ನು ಅವುಗಳಲ್ಲಿ ಪ್ರಕಟಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.