'ಸಾರ್ವಜನಿಕವಾಗಿ ಸಿಎಂ ಮಹಿಳೆಯರ ಮುಟ್ಟಬಹುದೇ?' ಎಂದ ಬಿಜೆಪಿ ವಕ್ತಾರನ ಟ್ವೀಟ್ ಟ್ರಾಲ್

By Suvarna Web DeskFirst Published Jan 11, 2018, 1:05 PM IST
Highlights

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸೆಲ್ಫೀ ತೆಗೆದುಕೊಳ್ಳಲು ಮುಂದಾದ ಯುವತಿಯ ಕೈ ಹಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆಗೆ ಬಿಜೆಪಿ ವಕ್ತಾರ ಮಾಳವೀಯ ಕುಹಕವಾಗಿ ಟ್ವೀಟ್ ಮಾಡಿದ್ದು, ಟ್ರಾಲ್ ಆಗಿದೆ.

ಬೆಂಗಳೂರು: ಇತ್ತೀಚೆಗೆ ಸಾಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಯುವತಿಯೊಬ್ಬಳಿಗೆ ಸೆಲ್ಫೀ ಪಾಠ ಹೇಳಿಕೊಟ್ಟಿದ್ದು ಸುದ್ದಿಯಾಗಿತ್ತು. ಯುವತಿಯ ಕೈ ಹಿಡಿದೆಳೆದು, ಸೆಲ್ಫೀಗೆ ಫೋಸ್ ನೀಡಿದ್ದಕ್ಕೆ, ಬಿಜೆಪಿ ವಕ್ತಾರ ಅಮಿಚ್ ಮಾಳವೀಯ, 'ಸಾರ್ವಜನಿಕ ಸ್ಥಳದಲ್ಲಿ ಸಿದ್ದರಾಮಯ್ಯ ಮಹಿಳೆಯ ಮೈ ಮುಟ್ಟಬಹುದೇ?' ಎಂದು ಟ್ವೀಟ್ ಮಾಡಿದ್ದರು. ಇದು ಟ್ರಾಲ್ ಆಗಿದ್ದು, 'ಎಲ್ಲವನ್ನೂ ಕೆಟ್ಟ ದೃಷ್ಟಿಯಲ್ಲಿಯೇ ಏಕೆ ನೋಡುತ್ತೀರಿ?'  ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಳವೀಯ ಟ್ವೀಟ್ 2 ಸಾವಿರಕ್ಕೂ ಹೆಚ್ಚು ಬಾರಿ ರೀ ಟ್ವೀಟ್ ಆಗಿದ್ದು ಸುಮಾರು 800 ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. 

ಮಾಳವೀಯ ಟ್ವೀಟ್ ಪರವಾಗಿ ಮಾತನಾಡಿರುವುದಕ್ಕಿಂತಲೂ, ವಿರೋಧವಾಗಿ ಮಾತನಾಡಿರುವವರು ಸಮಾರಂಭವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖೇಶ್ ಅಂಬಾನಿ ಪತ್ನಿ ನೀತು ಅಂಬಾನಿ ಕೈ ಹಿಡಿದಿರುವ ಫೋಟೋ ಹಾಗಿ, ಇದು 'ಸಭ್ಯತೆಯೇ?' ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ವಿದೇಶಿ ಮಹಿಳೆಯೊಬ್ಬನ್ನು ಮೋದಿ ತಬ್ಬಿರುವುದಕ್ಕೂ ಟೀಕೆಗಳು ವ್ಯಕ್ತವಾಗಿದೆ.

ಕಾಮಾಲೆ ಕಣ್ಣಿಗೆ ನೋಡಿದ್ದೆಲ್ಲಾ ಹಳದಿಯಾಗಿ ಕಾಣುವುದು ಅಷ್ಟೇ ,
ಆದರೆ ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧ ಈ ರೀತಿ ಆರೋಪ ಮಾಡುವ ಕಪಟವೇಷದಾರಿಗಳಾದ (hypocrites) ಸಂಘಪರಿವಾರದವರು ಪರಿವಾರವೆ ಇಲ್ಲದೆ ಸಂಘ ಹೇಗೆ ಕಟ್ಟುತ್ತಿದ್ದಾರೆ ಎಂಬುದು ನಮ್ಮನ್ನು ಕಾಡುವ ಪ್ರಶ್ನೆ ? ಅವರಿಗೆ ನಾವು ಏನನ್ನಬೇಕು ?

— ಬಸವರಾಜು.ಎ.ಪಿ. (@sribasavaraju)

https://t.co/cCO1h1YIxr
Check link.
Merci petition is to get out of jail & again work for country. Dying in jail is not good option. Better come out with any means to fight Brits. Achieve the goal by hook or crook. For crooked Brits he paid back in their style.

— ವಂದೇ ಮಾತರಂ (@NagRaj07871799)

ಜಗತ್ತಿಗೆ ಗೊತ್ತಿದೆ ನೀವು ಇತಿಹಾಸ ತಿರುಚುವುದರಲ್ಲಿ ಪರಿಣಿತರೆಂದು,
ನಮಗೆ ನಿಮ್ಮ ಸಂಘಟಕರ ವಿಷಯ ಗೊತ್ತಿದ್ದಿರು ಸಹ ನಾವು ನಿಮ್ಮ ರೀತಿ ಮಾತನಾಡುವುದಿಲ್ಲ ಏಕೆಂದರೆ ನಮ್ಮ ಸಂಘಟನೆಯಲ್ಲಿ ನಮಗೆ ಸುಸಂಸ್ಕೃತ ಬೋಧನೆಯಾಗಿದೆ.
ಪ್ರಧಾನಿ ಮೋದಿ & ಅವರ ಪತ್ನಿ ವಿಷಯದಲ್ಲಿ ನಿಮ್ಮಗಳ ರೀತಿನೇ ನಾವು ಮಾತನಾಡಿದರೆ ನಮಗೆ & ನಿಮಗೆ ಏನು ವೇತ್ಯಾಸ ಹೇಳಿ.

— ಬಸವರಾಜು.ಎ.ಪಿ. (@sribasavaraju)

ಬಹುಶಃ ಕಾಂಗ್ರೆಸ್ಸಿಗರ ಜಗತ್ತು ಹೀಗಿರಬಹುದು. ಸತ್ಯ ಇತಿಹಾಸ ತಿರುಚಿದ ಹಾಗೆ ಕಾಣುತ್ತೆ. ನಿಮ್ಮ ಕಾಂಗ್ರೆಸ್ ಕುಸಂಸ್ಕೃತಿ ದೇಶದ ಲೂಟಿ ಮಾಡಿ ಜಾತಿ ಮತ್ತು ಧರ್ಮ ಒಡೆದು ಅಧಿಕಾರ ಹಿಡಿಯುವುದು. ಜಿಗ್ನೇಶ್, ರಾ.ಗಾ. ತರಹದ ಹುಚ್ಚರು ನಿಮ್ಮ ಭವಿಷ್ಯದ ಲೀಡರ್ಗಳು. ನಿಮ್ಮ ಈ ಕುಸಂಸ್ಕೃತಿ ನೀವೇ ಇಟ್ಟುಕೊಳ್ಳಿ. ಜೈ ಹಿಂದ್.

— ವಂದೇ ಮಾತರಂ (@NagRaj07871799)

'ಸಾರ್ವಜನಿಕವಾಗಿ ಅಕ್ಕ-ತಂಗಿ, ತಾಯಯರನ್ನು ತಬ್ಬಿಕೊಳ್ಳುವುದರಲ್ಲಿ ತಪ್ಪೇನಿದೆ,' ಎಂದು ಹಲವರು ಪ್ರಶ್ನಿಸಿದ್ದಾರೆ.
 

click me!