ಕರ್ನಾಟಕದಲ್ಲಿ ಗೆಲುವಿಗೆ ಮಾಸ್ಟರ್ ಪ್ಲಾನ್ : ಹೊಸ ಘೋಷಣೆಯೊಂದಿಗೆ ಹೊರಟಿದೆ ಬಿಜೆಪಿ

Published : Mar 07, 2018, 09:27 AM ISTUpdated : Apr 11, 2018, 12:48 PM IST
ಕರ್ನಾಟಕದಲ್ಲಿ ಗೆಲುವಿಗೆ ಮಾಸ್ಟರ್ ಪ್ಲಾನ್ : ಹೊಸ ಘೋಷಣೆಯೊಂದಿಗೆ ಹೊರಟಿದೆ ಬಿಜೆಪಿ

ಸಾರಾಂಶ

ತ್ರಿಪುರದಲ್ಲಿ ಎಡರಂಗದ 25 ವರ್ಷಗಳ ಆಡಳಿತವನ್ನು ಕೊನೆಗಾಣಿಸಿ ಕೇಸರಿ ಧ್ವಜ ನೆಟ್ಟಿರುವ ಬಿಜೆಪಿ ಇದೀಗ ತನ್ನ ಸಂಪೂರ್ಣ ಗಮನವನ್ನು ಕರ್ನಾಟಕದತ್ತ ಹರಿಸಿದೆ. ದೆಹಲಿಯಲ್ಲಿ ಮಂಗಳವಾರ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಸಂಸದರೆಲ್ಲ ಸೇರಿ ‘ಜೀತ್‌ ಹಮಾರಿ ಜಾರಿ ಹೈ, ಅಬ್‌ ಕರ್ನಾಟಕ ಕಿ ಬಾರಿ ಹೈ’ (ನಮ್ಮ ಗೆಲುವಿನ ಓಟ ಜಾರಿಯಲ್ಲಿದೆ, ಮುಂದಿನ ಸರದಿಯಲ್ಲಿ ಕರ್ನಾಟಕ ಇದೆ) ಎಂಬ ಘೋಷಣೆ ಮೊಳಗಿಸಿದ್ದಾರೆ.

ನವದೆಹಲಿ : ತ್ರಿಪುರದಲ್ಲಿ ಎಡರಂಗದ 25 ವರ್ಷಗಳ ಆಡಳಿತವನ್ನು ಕೊನೆಗಾಣಿಸಿ ಕೇಸರಿ ಧ್ವಜ ನೆಟ್ಟಿರುವ ಬಿಜೆಪಿ ಇದೀಗ ತನ್ನ ಸಂಪೂರ್ಣ ಗಮನವನ್ನು ಕರ್ನಾಟಕದತ್ತ ಹರಿಸಿದೆ. ದೆಹಲಿಯಲ್ಲಿ ಮಂಗಳವಾರ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಸಂಸದರೆಲ್ಲ ಸೇರಿ ‘ಜೀತ್‌ ಹಮಾರಿ ಜಾರಿ ಹೈ, ಅಬ್‌ ಕರ್ನಾಟಕ ಕಿ ಬಾರಿ ಹೈ’ (ನಮ್ಮ ಗೆಲುವಿನ ಓಟ ಜಾರಿಯಲ್ಲಿದೆ, ಮುಂದಿನ ಸರದಿಯಲ್ಲಿ ಕರ್ನಾಟಕ ಇದೆ) ಎಂಬ ಘೋಷಣೆ ಮೊಳಗಿಸಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಎದ್ದು ನಿಲ್ಲುತ್ತಿದ್ದಂತೆ ಸಂಸದರು ಅವರನ್ನು ಈ ಘೋಷಣೆಯ ಮೂಲಕ ಅಭಿನಂದಿಸಿದರು ಎಂದು ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ತಿಳಿಸಿದ್ದಾರೆ.

‘ಪಕ್ಷದ ಗೆಲುವಿನ ಓಟವನ್ನು ಹೀಗೇ ಮುಂದುವರೆಸಲು ನಾವು ಕಷ್ಟಪಟ್ಟು ಕೆಲಸ ಮಾಡಬೇಕು. ದೇಶದ ಜನರಿಗೆ ನಮ್ಮ ಬಗ್ಗೆ ಬಹಳ ನಿರೀಕ್ಷೆಯಿದೆ’ ಎಂದು ಪರೋಕ್ಷವಾಗಿ ಅವರು ಕರ್ನಾಟಕದ ಚುನಾವಣೆಯ ಪ್ರಸ್ತಾಪ ಮಾಡಿದರು ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸವಣೂರು ಘಟನೆ ಕಾಂಗ್ರೆಸ್ ಓಲೈಕೆ ರಾಜಕಾರಣದ ಪ್ರತಿಬಿಂಬ, ರಾಜ್ಯದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆಯೂ ಸಂಸದ ಬೊಮ್ಮಾಯಿ ಕಿಡಿ
ಕಾಂಗ್ರೆಸ್ ರ‍್ಯಾಲಿಯಲ್ಲಿ ಹೊಸ ಗ್ಯಾರೆಂಟಿ ಘೋಷಿಸಿದ ರಾಹುಲ್ ಗಾಂಧಿ, ಈ ಭಾರಿಯ ಭರವಸೆ ಏನು?