ಗೋವಾದಲ್ಲಿ ಬಿಜೆಪಿ-ಎಂಜಿಪಿ ನಡುವೆ ಬಿಕ್ಕಟ್ಟು

Published : Dec 12, 2016, 01:43 PM ISTUpdated : Apr 11, 2018, 01:13 PM IST
ಗೋವಾದಲ್ಲಿ ಬಿಜೆಪಿ-ಎಂಜಿಪಿ ನಡುವೆ ಬಿಕ್ಕಟ್ಟು

ಸಾರಾಂಶ

‘‘ಅವರಿಗೆ ಇರಲು ಕಷ್ಟವಾಗಿದ್ದರೆ, ರಾಜಿನಾಮೆ ಸಲ್ಲಿಸಿ ನಮ್ಮ ವಿರುದ್ಧ ಹೇಳಿಕೆ ನೀಡಲಿ,’’ ಎಂದು ಧಾವಲಿಕರ್‌ಗೆ ಪರ್ಸೇಕರ್ ಸವಾಲು ಹಾಕಿದ್ದಾರೆ.

ಪಣಜಿ(ಡಿ.12): ಗೋವಾದಲ್ಲಿ ಆಡಳಿತರೂಢ ಮೈತ್ರಿ ಪಕ್ಷಗಳಾಗಿರುವ ಬಿಜೆಪಿ ಮತ್ತು ‘ಮಹಾರಾಷ್ಟ್ರವಾಡ ಗೋಮಂಟಕ್ ಪಕ್ಷ(ಎಂಜಿಪಿ)’ದ ನಡುವಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದಿದೆ.

ಮೈತ್ರಿ ಬಗ್ಗೆ ಅಸಮಾಧಾನ ಇರುವವರು ಹೊರ ನಡೆಯಲು ಸರ್ವ ಸ್ವತಂತ್ರರು ಎಂಬ ಸಿಎಂ ಲಕ್ಷ್ಮಿಕಾಂತ್ ಪರ್ಸೇಕರ್ ಅವರ ಹೇಳಿಕೆ ಹಿನ್ನೆಲೆಯಲ್ಲಿ ವಿಧಾನಸಭೆಯನ್ನು ವಿಸರ್ಜಿಸುವಂತೆ ಎಂಜಿಪಿ ಆಗ್ರಹಿಸಿದೆ. ಕಳೆದೆರಡು ವರ್ಷಗಳ ಪರ್ಸೇಕರ್ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿ 10 ವರ್ಷಗಳ ಹಿಂದೆ ಹೋಗಿದೆ ಎಂದು ಎಂಜಿಪಿ ನಾಯಕ ಮತ್ತು ಸಾರಿಗೆ ಸಚಿವ ಸುದಿನ್ ಧಾವಲಿಕರ್ ಆರೋಪಿಸಿದ್ದರು.

‘‘ಅವರಿಗೆ ಇರಲು ಕಷ್ಟವಾಗಿದ್ದರೆ, ರಾಜಿನಾಮೆ ಸಲ್ಲಿಸಿ ನಮ್ಮ ವಿರುದ್ಧ ಹೇಳಿಕೆ ನೀಡಲಿ,’’ ಎಂದು ಧಾವಲಿಕರ್‌ಗೆ ಪರ್ಸೇಕರ್ ಸವಾಲು ಹಾಕಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ