
ಮೈಸೂರು(ಮೇ 07): ನಿನ್ನೆಯವರೆಗೂ ಪರಸ್ಪರ ಮುಖನೋಡದಷ್ಟು ಮುನಿಸು ತೋರ್ಪಡಿಸಿದ್ದ ಬಿಎಸ್ ಯಡಿಯೂರಪ್ಪ ಮತ್ತು ಕೆಎಸ್ ಈಶ್ವರಪ್ಪ ಇದೀಗ ಕೈಕೈ ಹಿಡಿದು ವೇದಿಕೆ ಏರಿದ ಅಪರೂಪದ ಘಟನೆಗೆ ಬಿಜೆಪಿ ಕಾರ್ಯಕಾರಿಣಿ ಸಭೆ ಸಾಕ್ಷಿಯಾಗಿದೆ. ಕಾರ್ಯಕಾರಿಣಿ ಸಭೆಯ ಎರಡನೇ ದಿನವಾದ ಇಂದು ಯಡಿಯೂರಪ್ಪನವರೇ ಖುದ್ದಾಗಿ ಈಶ್ವರಪ್ಪನವರ ಕೈಹಿಡಿದು ವೇದಿಕೆಗೆ ಕರೆದೊಯ್ದು ನೆರೆದಿದ್ದವರೆಲ್ಲರಿಗೂ ಅಚ್ಚರಿ ಮೂಡಿಸಿದರು. ವೇದಿಕೆ ಮೇಲೆ ಇಬ್ಬರೂ ಕೂಡ ಅಕ್ಕಪಕ್ಕದ ಆಸನಗಳಲ್ಲೇ ಆಸೀನರಾಗಿದ್ದು ಗಮನಾರ್ಹ. ನಿನ್ನೆ ಸಭೆಯ ಮೊದಲ ದಿನದಂದು ಈಶ್ವರಪ್ಪ ನಮಸ್ಕರಿಸಿದರೂ ದೃಷ್ಟಿ ಹಾಯಿಸದ ಯಡಿಯೂರಪ್ಪ ಇಂದು ಈ ಪರಿ ಬದಲಾವಣೆ ತೋರಲು ಏನು ಕಾರಣ?
ಬಿಜೆಪಿ ಮೂಲಗಳ ಪ್ರಕಾರ, ನಿನ್ನೆ ರಾತ್ರಿ ಬಿಜೆಪಿ ವರಿಷ್ಠರು ಬಿಎಸ್'ವೈ ಮತ್ತು ಈಶ್ವರಪ್ಪ ಇಬ್ಬರನ್ನೂ ಒಟ್ಟಿಗೆ ಕರೆಸಿ ಬುದ್ಧಿವಾದ ಹೇಳಿದರೆನ್ನಲಾಗಿದೆ. ಬಿಜೆಪಿಯಲ್ಲಿ ಯಾವ ರೀತಿಯಲ್ಲೂ ಒಡಕು ತೋರ್ಪಡಿಸಬಾರದೆಂದು ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರಿಂದಾಗಿ ಇವರಿಬ್ಬರೂ ಬಹಿರಂಗವಾಗಿ ತಮ್ಮ ಮುನಿಸನ್ನು ತೋರಿಲ್ಲವೆನ್ನಲಾಗಿದೆ.
ಕಾರ್ಯಕಾರಿಣಿಯಲ್ಲಿ ಭಾಷಣ ಮಾಡಿದ ಕೆಎಸ್ ಈಶ್ವರಪ್ಪನವರು, ತಮ್ಮೆಲ್ಲರ ನಾಯಕ ಬಿಎಸ್'ವೈ ಅವರೇ ಮುಂದಿನ ಸಿಎಂ ಎಂಬ ಮಾತನ್ನು ಪುನರುಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.