
ಬೆಂಗಳೂರು : ಬೆಂಗಳೂರಿನ ವಿವಿಧ ಟ್ರಾಫಿಕ್ ಸಿಗ್ನಲ್’ಗಳಲ್ಲಿ ಇನ್ನುಮುಂದೆ ಎಷ್ಟೊತ್ತಿಗೆ ಸಿಗ್ನಲ್ ಬಿಡುತ್ತೆ ಎಂದು ತಲೆ ಬಿಸಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಯಾಕೆಂದರೆ ಎಲ್ಲಾ ಟ್ರಾಫಿಕ್ ಸಿಗ್ನಲ್’ಗಳಲ್ಲಿಯೂ ಕೂಡ ಸರ್ಕಾರ ಟೈಮರ್ ಅಳವಡಿಕೆ ಮಾಡಲು ಹಣವನ್ನು ಬಿಡುಗಡೆ ಮಾಡಿದೆ.
ಇದರಿಂದ ಅತ್ಯಂತ ಹೆಚ್ಚಿನ ಟ್ರಾಫಿಕ್ ಇರುವ ಸಂದರ್ಭದಲ್ಲಿ ವಾಹನಗಳನ್ನು ಸುಮ್ಮನೆ ಆನ್ ಮಾಡಿಕೊಂಡು ನಿಲ್ಲುವ ರಗಳೆ ತಪ್ಪಲಿದ್ದು, ಟೈಮರ್’ಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಇಂಧನ ಉಳಿತಾಯವೂ ಕೂಡ ಗಲಿದೆ.
ಅಲ್ಲದೇ ವಾಹನಗಳು ಆನ್ ಆಗಿ ಇರುವುದರಿಂದ ಆಗುವಂತಹ ಅತ್ಯಧಿಕ ಪ್ರಮಾಣದ ಮಾಲಿನ್ಯವೂ ಕೂಡ ತಪ್ಪಲಿದೆ. ಬೆಂಗಳೂರಿನಲ್ಲಿ ಪೀಕ್ ಅವರ್’ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನ ಸಂಚಾರವಿರುತ್ತದೆ. ಇಂತಹ ಸಂದರ್ಭದಲ್ಲಿ ಟೈಮರ್’ಗಳು ಇಲ್ಲದಿದ್ದಲ್ಲಿ ಎಷ್ಟು ಸಂದರ್ಭದವರೆಗೂ ನಿಲ್ಲಬೇಕಾಗುತ್ತದೆ ಎನ್ನುವ ಸರಿಯಾದ ಅಂದಾಜು ಕೂಡ ಇರುವುದಿಲ್ಲ.
ಆದರೆ ಟೈಮರ್ ಅಳವಡಿಕೆಯಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ದೊರಕಿದಂತಾಗುತ್ತದೆ. ಇದೀಗ ಬೆಂಗಳೂರಿನ ಎಲ್ಲಾ ಸಿಗ್ನಲ್’ಗಳಿಗೂ ಟೈಮರ್ ಅಳವಡಿಕೆ ಮಾಡಲು ಸರ್ಕಾರ ಹಣವನ್ನು ಬಿಡುಗಡೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.