ಅರಕ್ಷಕ ಭಕ್ಷಕನಾದ : ಅತ್ಯಾಚಾರಕ್ಕೆ ಯತ್ನಿಸಿದ ಪಿಎಸ್'ಐ

By Suvarna Web DeskFirst Published May 21, 2017, 9:21 PM IST
Highlights

ಜಿಲ್ಲೆಯ ರಾಯಭಾಗ ತಾಲೂಕಿನ ಗುಂಡವಾಡ ಗ್ರಾಮದಲ್ಲಿ ಬೇರೆ ಬೇರೆ ಜಾತಿಯ ಯುವಕ ಮತ್ತು ಯುವತಿ ಎರಡು ವರ್ಷದಿಂದ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಯುವತಿಯ ಸಮುದಾಯದ ಮುಖಂಡರು ಯುವತಿಯ ಮೇಲೆ ಒತ್ತಡ ಹಾಕಿ ಯುವಕನನ್ನು ಬಿಟ್ಟು ಬರುವಂತೆ ಒತ್ತಾಯಿಸಿದರು. ಇದಕ್ಕೆ ಯುವತಿ ಜಗ್ಗದಿದ್ದಾಗ ಯುವಕನ ಮೇಲೆ ಕುಡಚಿ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿ ಆತನನ್ನು ಬಂಧಿಸುವಂತೆ ಮಾಡಿದರು.  

ಬೆಳಗಾವಿ(ಮೇ.21): ಅನ್ಯ ಧರ್ಮದ ಯುವತಿಯನ್ನು ಪ್ರೀತಿಸಿದ ತಪ್ಪಿಗೆ ರಕ್ಷಣೆ ಕೊಡಬೇಕಾದ ಆರಕ್ಷಕನೆ‌ ರಾಕ್ಷಕನಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಜಿಲ್ಲೆಯ ರಾಯಭಾಗ ತಾಲೂಕಿನ ಗುಂಡವಾಡ ಗ್ರಾಮದಲ್ಲಿ ಬೇರೆ ಬೇರೆ ಜಾತಿಯ ಯುವಕ ಮತ್ತು ಯುವತಿ ಎರಡು ವರ್ಷದಿಂದ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಯುವತಿಯ ಸಮುದಾಯದ ಮುಖಂಡರು ಯುವತಿಯ ಮೇಲೆ ಒತ್ತಡ ಹಾಕಿ ಯುವಕನನ್ನು ಬಿಟ್ಟು ಬರುವಂತೆ ಒತ್ತಾಯಿಸಿದರು. ಇದಕ್ಕೆ ಯುವತಿ ಜಗ್ಗದಿದ್ದಾಗ ಯುವಕನ ಮೇಲೆ ಕುಡಚಿ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿ ಆತನನ್ನು ಬಂಧಿಸುವಂತೆ ಮಾಡಿದರು.  

ಯುವತಿ ಯಾಕೆ ನನ್ನ ಗಂಡನನ್ನು  ಬಂಧಿಸಿದ್ದೀರಿ ಎಂದು ಕುಡಚಿ ಪೊಲೀಸ್ ಠಾಣೆಯ  ಪಿ.ಎಸ್.ಐ ಶಿವಶಂಕರ ಮುಕರಿ ಅವರನ್ನು ಕೇಳಲು ಹೋದಾಗ ಆತ ಯುವತಿಗೆ ಚಿತ್ರ ಹಿಂಸೆ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತನಗಾಗಿರುವ ಅನ್ಯಾಯದ ಬಗ್ಗೆ ನವಜೋಡಿಗಳು ಇಂದು ಬೆಳಗಾವಿ ಜಿಲ್ಲಾ ಪೊಲೀಸ ಉಪ  ವರಿಷ್ಠಾಧಿಕಾರಿ ಮುಂದೆ ತಮ್ಮ ಅಳಲು ತೋಡಿಕೊಂಡು ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.ಮನವಿ ಸ್ವೀಕರಿಸಿದ ಎ.ಎಸ್.ಪಿ ಗಡಾದ ಅವರು ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.

ಇದೇ ಎಸ್'ಐ ಒಂದು ತಿಂಗಳ ಹಿಂದೆ ಬಾರ್ ಮ್ಯಾನೇಜರ್ ಮೇಲೆ  ಹಲ್ಲೆ ಮಾಡಿ ವಿವಾದಕ್ಕೆ ಗುರಿಯಾಗಿದ್ದ. ಈತ ಹಲ್ಲೆ ಮಾಡಿದ ದೃಶ್ಯ ಸಿ.ಸಿ.ಟಿ.ವಿಯಲ್ಲ ದಾಖಲಾಗಿತ್ತು. ಈ ಕೃತ್ಯದ ವಿರುದ್ಧ ಮಾನವ ಹಕ್ಕುಗಳ ಆಯೋಗ ಶಿವಶಂಕರ್  ಮತ್ತು ಡಿ.ವೈ.ಎಸ್.ಪಿ  ನಾಗರಾಜ್ ವಿರುದ್ಧ ನೋಟಿಸ್ ಸಹ ಜಾರಿ ಮಾಡಿತ್ತು.

click me!