ದೆಹಲಿಯ ಜಗತ್'ಪುರಿ ಇಲಾಖೆಯ ಸುಮಾರು 50 ಕ್ಕೂ ಅಧಿಕ ಮಂದಿ ಸೇರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ೆಟಿಎಂ ಮಷೀನ್'ಗಳಿಗೆ ಈ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ ವ್ಯಕ್ತಿಯೊಬ್ಬರು 'ಕೇಂದ್ರ ಜಾರಿಗೊಳಿಸಿದ ನೋಟ್ ಬ್ಯಾನ್ ಬಳಿಕ ಜನರು ಪರದಾಡುತ್ತಿರುವುದನ್ನು ಕಂಡು, ಅವರ ಸಮಸ್ಯೆ ನಿವಾರಣೆಯಾಗಲಿ ಎಂಬ ಆಶಯದೊಂದಿಗೆ ನಾವು ಈ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ' ಎಂದಿದ್ದಾರೆ.
ನವದೆಹಲಿ(ಡಿ.05): ಪೂರ್ವ ದೆಹಲಿಯ ಬ್ಯಾಂಕ್ ಹಾಗೂ ಎಟಿಎಂ ಒರಗೆ 'ನೋ ಕ್ಯಾಷ್' ಎಂಬ ಸಂದೇಶ ಕಂಡು ಹತಾಶರಾದ ನಿವಾಸಿಗಳು ಭಾನುವಾರದಂದು ಎಟಿಎಂಗಳ 'ಪೂಜೆ' ಮಾಡುವ ಕಾರ್ಯವನ್ನು ಆರಂಭಿಸಿದ್ದಾರೆ. ಈ ಪೂಜೆಯ ವೇಳೆ ಎಟಿಎಂನಲ್ಲಿ ಹಣವಿರಲಿ ಎಂಬ ಪ್ರಾರ್ಥನೆ ಸಲ್ಲಿಸಿದ್ದಾರೆ.
ದೆಹಲಿಯ ಜಗತ್'ಪುರಿ ಇಲಾಖೆಯ ಸುಮಾರು 50 ಕ್ಕೂ ಅಧಿಕ ಮಂದಿ ಸೇರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ೆಟಿಎಂ ಮಷೀನ್'ಗಳಿಗೆ ಈ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ ವ್ಯಕ್ತಿಯೊಬ್ಬರು 'ಕೇಂದ್ರ ಜಾರಿಗೊಳಿಸಿದ ನೋಟ್ ಬ್ಯಾನ್ ಬಳಿಕ ಜನರು ಪರದಾಡುತ್ತಿರುವುದನ್ನು ಕಂಡು, ಅವರ ಸಮಸ್ಯೆ ನಿವಾರಣೆಯಾಗಲಿ ಎಂಬ ಆಶಯದೊಂದಿಗೆ ನಾವು ಈ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ' ಎಂದಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾತನಾಡಿದ ಪುನೀತ್ ತಿವಾರಿ 'ಈವರೆಗೆ ವೃದ್ಧರು ಹಾಗೂ ತಯವಕ ಯುವತಿಯರು ವಾಕಿಂಗ್ ಮಾಡುತ್ತಿರುವುದನ್ನು ನೋಡುತ್ತಿದ್ದೆ. ಆದರೆ ನೋಟ್ ಬ್ಯಾನ್ ಬಳಿಕ ಜನರು ಎಟಿಎಂಗಾಗಿ ಸುತ್ತಾಡುವುದು ಸಾಮಾನ್ಯವಾಗಿದೆ' ಎಂದಿದ್ದಾರೆ.