
ನವದೆಹಲಿ (ಆ. 21): 1998 ರಲ್ಲಿ ಜಯಲಲಿತಾ ತಿರುಗಿಬಿದ್ದಾಗ ಒಂದು ವೋಟಿನಿಂದ ಅಧಿಕಾರ ಕಳೆದುಕೊಂಡು ಸದನದಿಂದ ಪ್ರಧಾನಿ ಕಚೇರಿಗೆ ಬಂದಾಗ ಅಟಲ್ ಅಕ್ಷರಶಃ ಕಣ್ಣೀರು ಹಾಕುತ್ತಿದ್ದರಂತೆ.
ಇವರನ್ನು ಹೇಗೆ ಸಮಾಧಾನಪಡಿಸುವುದು ಎಂದು ಸಚಿವರು ಪರದಾಡುತ್ತಿದ್ದಾಗ ಅಟಲ್ಜಿ ಏಕ್ ವೋಟ್ ಸಿರ್ಫ್ ಏಕ್ ವೋಟ್ ಎಂದು ಹೇಳಿ ಬೇಸರ ವ್ಯಕ್ತಪಡಿಸುತ್ತಿದ್ದರಂತೆ. ನಂತರ ಕೂಡಲೇ ಮಂತ್ರಿಗಳನ್ನು ಕರೆದು ರಾಷ್ಟ್ರಪತಿಗಳ ಬಳಿ ಹೋಗೋಣ, ಹೋಗುವಾಗ ಸರ್ಕಾರಿ ವಾಹನ, ಬರುವಾಗ ಮಾತ್ರ ಸ್ವಂತ ಖಾಸಗಿ ವಾಹನದಲ್ಲಿ ಎಂದು ಹೇಳಿ ರಾಷ್ಟ್ರಪತಿಗಳಿಗೆ ರಾಜೀನಾಮೆ ಸಲ್ಲಿಸಿ ವಾಪಸ್ ಪಾರ್ಲಿಮೆಂಟ್ಗೆ ಬಂದರಂತೆ.
ಕಾರಿಡಾರ್ನಲ್ಲಿ ಅಟಲ್ಜಿ ಸಾವಕಾಶವಾಗಿ ನಡೆದುಕೊಂಡು ಹೊರಟಾಗ ಎದುರಿಗೆ ಸೋನಿಯಾ ಗಾಂಧಿ ಬರುತ್ತಿದ್ದರಂತೆ. ಕೂಡಲೇ ಸೋನಿಯಾರನ್ನು ನೋಡಿ ಅಟಲ್ಜಿ ಮುಗುಳ್ನಗೆ ಬೀರಿದಾಗ ಹೇಗೆ ಪ್ರತಿಕ್ರಿಯೆ ಕೊಡುವುದು ಎಂದು ಗೊತ್ತಾಗದೆ ಸೋನಿಯಾ ಸುಮ್ಮನೆ ಇದ್ದರಂತೆ. ಆಗ ಅಟಲ್ಜಿ ಸೋನಿಯಾರಿಗೆ ಮೊಹತರಮಾ ತಾಜ್ ತೋ ಉತಾರ ಹಿ ದಿಯಾ, ಅಬ್ ತೋ ಮುಸ್ಕುರಾವೋ ಎಂದರಂತೆ. ಮೇಡಂ, ಕಿರೀಟವನ್ನಂತೂ ತೆಗೆಸಿಯೇಬಿಟ್ರಿ ಈಗಲಾದರೂ ನಗಿ!
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.