ಸಿಎಂ ಮನೆ ಕೆಡವಲು ನೊಟೀಸ್: ಇದೆಂತಾ ಪಾಲಿಟಿಕ್ಸ್?

Published : Jun 28, 2019, 05:01 PM ISTUpdated : Jun 28, 2019, 05:34 PM IST
ಸಿಎಂ ಮನೆ ಕೆಡವಲು ನೊಟೀಸ್: ಇದೆಂತಾ ಪಾಲಿಟಿಕ್ಸ್?

ಸಾರಾಂಶ

ಮುಖ್ಯಮಂತ್ರಿ ಕೆಡವಲು ಅಭಿಪ್ರಾಯ ಕೇಳಿ ನೊಟೀಸ್| ಸಿಎಂ ಮನೆ ಬಾಗಿಲಿಗೆ ನೊಟೀಸ್ ಅಂಟಿಸಿ ಬಂದ ಅಧಿಕಾರಿಗಳು| ಆಂಧ್ರದಲ್ಲಿ ತಾರಕಕ್ಕೇರಿದ ಸಿಎಂ, ಮಾಜಿ ಸಿಎಂ ನಡುವಿನ ಕದನ| ಟಿಡಿಪಿ ಕಚೇರಿ ಪ್ರಜಾ ವೇದಿಕೆ ಕೆಡವಿ ಹಾಕಿದ್ದ ಸಿಎಂ ಜಗನ್ ಮೋಹನ್ ರೆಡ್ಡಿ| ನಾಯ್ಡು ಅಧಿಕೃತ ನಿವಾಸದ ಮೇಲೂ ಕಣ್ಣು ಹಾಕಿದ ಆಂಧ್ರ ಸರ್ಕಾರ| ಅಭಿಪ್ರಾಯ ತಿಳಿಸುವಂತೆ ಆಂಧ್ರ ಪ್ರದೇಶದ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ನೊಟೀಸ್|

ಅಮರಾವತಿ(ಜೂ.28): ಆಂಧ್ರದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ನಡುವಿನ ರಾಜಕೀಯ ಜಿದ್ದಾಜಿದ್ದಿ ತೀವ್ರ ಸ್ವರೂಪ ಪಡೆದುಕೊಂಡಿದೆ.

ಕೆಲವೇ ದಿನಗಳ ಹಿಂದೆ 8 ಕೋಟಿ ರೂ. ಮೌಲ್ಯದ ಟಿಡಿಪಿ ಕಚೇರಿ ಕೆಡವಿ ಹಾಕಿದ್ದ ಸಿಎಂ ಜಗನ್, ಇದೀಗ ನಾಯ್ಡು ಅವರ ಅಧಿಕೃತ ನಿವಾಸದ ಮೇಲೂ ಕಣ್ಣು ಹಾಕಿದ್ದಾರೆ.

ಮನೆಯನ್ನು ತೆರವುಗೊಳಿಸುವ ಕುರಿತಂತೆ ಅಭಿಪ್ರಾಯ ತಿಳಿಸಿ ಎಂದು ಆಂಧ್ರ ಪ್ರದೇಶದ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ಚಂದ್ರಬಾಬು ನಾಯ್ಡು ಅವರಿಗೆ ನೊಟೀಸ್ ನೀಡಿದೆ.

ಈ ಮೂಲಕ ಕಚೇರಿ ಕಳೆದುಕೊಂಡಿದ್ದ ಚಂದ್ರಬಾಬು ನಾಯ್ಡು ಇದೀಗ ತಮ್ಮ ಅಧಿಕೃತ ಮನೆಯನ್ನೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅಮರಾವತಿ ನಿರ್ಮಾಣದಲ್ಲಿ ಭಾರೀ ಭೂಗಳ್ಳತನ ನಡೆದಿದ್ದು, ಇದಕ್ಕೆ ನಾಯ್ಡು ಸರ್ಕಾರವೇ ನೇರ ಹೊಣೆ ಎಂದು ಪ್ರಸಕ್ತ ಸರ್ಕಾರ ಆರೋಪಿಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!
15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ