
ನವದೆಹಲಿ (ಏ.12): ಯಮುನಾ ನದಿ ತಟ ಹಾಳಾಗಲು ಶ್ರೀ ಶ್ರೀ ರವಿಶಂಕರ್ ಗುರೂಜಿಯ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯೇ ಕಾರಣವೆಂದು ರಾಷ್ಟ್ರೀಯ ಹಸಿರು ಪೀಠವು ನೇಮಿಸಿದ್ದ ಸಮಿತಿಯು ಹೇಳಿದೆ.
ಕಳೆದ ವರ್ಷ ಮಾರ್ಚ್’ನಲ್ಲಿ ಯಮುನಾ ನದಿ ತಟದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ವಿಶ್ವ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿತ್ತು. ಯಮುನಾ ನದಿ ತಟದ ಪುನರ್ನಿರ್ಮಾಣಕ್ಕೆ ರೂ.13.29 ಕೋಟಿ ರೂ. ಬೇಕಾಗುವುದು ಹಾಗೂ ಹತ್ತು ವರ್ಷಗಳ ಅವಧಿ ತಗಲುವುದು ಎಂದು ಸಮಿತಿಯು ಹಸಿರು ಪೀಠಕ್ಕೆ ತಿಳಿಸಿದೆ.
3 ದಿನಗಳ ವಿಶ್ವ ಸಾಂಸ್ಕೃತಿಕ ಉತ್ಸವದಿಂದ ಯಮುನಾ ತಟಕ್ಕೆ ಭಾರೀ ಹಾನಿಯಾಗಿರುವ ಹಿನ್ನೆಲೆಯಲ್ಲಿ ಹಸಿರು ಪೀಠವು ರವಿಶಂಕರ್ ಗುರೂಜಿ ಸಂಸ್ಥೆಗೆ ರೂ. 5 ಕೋಟಿ ಮಧ್ಯಂತರ ದಂಡವನ್ನು ವಿಧಿಸಿತ್ತು. ಆದರೆ ಸಂಸ್ಥೆಯು. 4.75 ಕೋಟಿ ರೂ.ವನ್ನು ಪಾವತಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.