
ದೆಹಲಿ(ಜೂನ್.2): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಟೀಮ್ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರನ್ನ ಬೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಿಜೆಪಿಯ ಬೆಂಬಲಕ್ಕಾಗಿ ಬೇಟಿ( ಸಂಪರ್ಕ್ ಫಾರ್ ಸಮರ್ಥನ್) ಅಭಿಯಾನದಡಿ ಅಮಿತ್ ಶಾ, ದೆಹಲಿಯಲ್ಲಿರುವ ಕಪಿಲ್ ನಿವಾಸಕ್ಕೆ ಬೇಟಿ ನೀಡಿದರು. ಕಪಿಲ್ ದೇವ್ ಹಾಗೂ ಕಪಿಲ್ ಪತ್ನಿಯನ್ನ ಬೇಟಿಯಾದ ಅಮಿತ್ ಶಾ, ಮೋದಿ ಸರ್ಕಾರದ 4 ವರ್ಷದ ಸಾಧನೆಯನ್ನ ವಿವರಿಸಿದರು. ಬೇಟಿ ಬಳಿಕ ಅಮಿತ್ ಶಾ ತಮ್ಮ ಸಂತಸವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೆಂಬಲಕ್ಕಾಗಿ ಬೇಟಿ ಅಭಿಯಾನದಡಿ ಅಮಿತ್ ಶಾ ಕನಿಷ್ಠ 50 ಗಣ್ಯರನ್ನ ಬೇಟಿಯಾಗಿ ಮೋದಿ ಸರ್ಕಾರದ ಸಾಧನೆಯನ್ನ ವಿವರಿಸಲಿದ್ದಾರೆ. ಇದೇ ಕಾರ್ಯಕ್ರಮದಡಿ ಇತ್ತೀಚೆಗೆ ಅಮಿತ್ ಶಾ ಭಾರತೀಯ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅವರನ್ನ ಬೇಟಿಯಾಗಿದ್ದರು.ಇದೇ ವೇಳೆ ಭಾರತೀಯ ಸೇನೆಗೆ ಮೋದಿ ಸರ್ಕಾರದ ಕೊಡುಗೆಯನ್ನ ವಿವರಿಸಿದ್ದರು. ಜೊತೆಗೆ ಸೇನೆಯ ಸುಧಾರಣೆಗೆ ದಲ್ಬೀರ್ ಅವರಲ್ಲಿ ಸಲಹೆ ಪಡೆದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.