'ಭಾರತ್ ಕೇ ವೀರ್' ಗೀತೆಗೆ ಚಾಲನೆ, ನಮ್ಮ ಸೈನಿಕರಿಗಾಗಿ 12 ಕೋಟಿ ರೂ.ಸಂಗ್ರಹ

By Suvarna Web DeskFirst Published Jan 21, 2018, 1:18 PM IST
Highlights

ಹುತಾತ್ಮರ ಕುಟುಂಬದ ಕ್ಷೇಮಾಭಿವೃದ್ಧಿಗಾಗಿ ಆರಂಭವಾದ 'ಭಾರತ್ ಕೇ ವೀರ್' ಅಭಿಯಾನದ ಗೀತೆಗೆ ಚಾಲನೆ ನೀಡಿದ್ದು, ಈ ಕಾರ್ಯಕ್ರಮದಲ್ಲಿ  12.93 ಕೋಟಿ ರೂ. ಸಂಗ್ರಹಿಸಲಾಗಿದೆ.

ಹೊಸದಿಲ್ಲಿ: ಹುತಾತ್ಮರ ಕುಟುಂಬದ ಕ್ಷೇಮಾಭಿವೃದ್ಧಿಗಾಗಿ ಆರಂಭವಾದ 'ಭಾರತ್ ಕೇ ವೀರ್' ಅಭಿಯಾನದ ಗೀತೆಗೆ ಚಾಲನೆ ನೀಡಿದ್ದು, ಈ ಕಾರ್ಯಕ್ರಮದಲ್ಲಿ  12.93 ಕೋಟಿ ರೂ. ಸಂಗ್ರಹಿಸಲಾಗಿದೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ನೇತೃತ್ವದಲ್ಲಿ ಆರಂಭವಾದ ಈ ಅಭಿಯಾನದಲ್ಲಿ ಸಂಗ್ರಹವಾದ ಹಣವನ್ನು ಹುತಾತ್ಮರ ಕುಟುಂಬಕ್ಕೆ ಹಾಗೂ ಸೈನಿಕರ ಮಕ್ಕಳ ಶಿಕ್ಷಣಕ್ಕೆ ಮೀಸಲಿಡಲಾಗುವುದು.

 

No amount of gratitude is enough for our soldiers. We managed to raise Rs. 12.93 crores today! Grateful to all the people who came and showed their support at the Anthem launch. Special thank you to Hon. ji for this platform. pic.twitter.com/6O1sPo20Jh

— Akshay Kumar (@akshaykumar)

 

ಕೈಲಾಶ್ ಖೇರ್ ಸಂಗೀತ ಸಂಯೋಜಿಸಿ, ಹಾಡಿರುವ ಈ ಗೀತೆಯನ್ನು ಡೌನ್‌ಲೋಡ್ ಮಾಡಿಕೊಂಡಾಗ ಬಂದ ಹಣವೂ ಸೈನಿಕರ ಕುುಟಂಬದ ಅಗತ್ಯಗಳನ್ನು ಪೂರೈಸಲು ಬಳಸಲಾಗುವುದು. ಮೃತ ಸೈನಿಕರ ಕುಟುಂಬಕ್ಕೆ ಕನಿಷ್ಠ 1 ಕೋಟಿ ರೂ. ಸಿಗುವಂತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ.

At the Anthem launch sung by . While they keep us alive, the least we can do is keep them alive in our hearts. Bharat ke veeron, tumko naman 🙏🏻 pic.twitter.com/zJuzsT02AQ

— Akshay Kumar (@akshaykumar)

ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್, ಕೇಂದ್ರ ಸಚಿವರಾದ ಕಿರೆಣ್  ರಿಜಿಜು, ಹನ್ಸ್‌ರಾಜ್ ಅಹಿರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮುಂತಾದವರು ಉಪಸ್ಥಿತರಿದ್ದರು.
 

click me!