ಕೇಜ್ರಿವಾಲ್'ಗೆ 10 ಸಾವಿರ ರು. ‘ದಂಡ’

Published : Jul 27, 2017, 01:01 AM ISTUpdated : Apr 11, 2018, 12:51 PM IST
ಕೇಜ್ರಿವಾಲ್'ಗೆ 10 ಸಾವಿರ ರು. ‘ದಂಡ’

ಸಾರಾಂಶ

ಮೊದಲ ಮಾನಹಾನಿ ದಾವೆಯ ವಿಚಾರಣೆ ವೇಳೆ ಈ ಪದವನ್ನು ಕೇಜ್ರಿವಾಲ್ ಪರ ಅವರ ವಕೀಲ ರಾಮ್ ಜೇಠ್ಮಲಾನಿ ಪ್ರಯೋಗಿಸಿದ್ದರು.

ನವದೆಹಲಿ(ಜು.27): ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಹೂಡಿದ ಎರಡನೇ ಮಾನಹಾನಿ ದಾವೆಗೆ ಸಂಬಂಧಿಸಿದಂತೆ 10ಸಾವಿರ ರು. ಕೋರ್ಟ್ ಕಲಾಪದ ವೆಚ್ಚವನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೆಯೇ ದಿಲ್ಲಿ ಹೈಕೋರ್ಟ್ ಹೊರಿಸಿದೆ.

ತಮ್ಮನ್ನು ಮೋಸಗಾರ ಎಂದು ಕೇಜ್ರಿವಾಲ್ ಅವರು ವಕೀಲರ ಮೂಲಕ ಜರಿದಿದ್ದನ್ನು ಪ್ರಶ್ನಿಸಿದ್ದ ಜೇಟ್ಲಿ, ಕೇಜ್ರಿವಾಲ್ ಮೇಲೆ 10 ಕೋಟಿ ರು. ಮಾನಹಾನಿ ದಾವೆ ಹಾಕಿದ್ದರು. ಮೊದಲ ಮಾನಹಾನಿ ದಾವೆಯ ವಿಚಾರಣೆ ವೇಳೆ ಈ ಪದವನ್ನು ಕೇಜ್ರಿವಾಲ್ ಪರ ಅವರ ವಕೀಲ ರಾಮ್ ಜೇಠ್ಮಲಾನಿ ಪ್ರಯೋಗಿಸಿದ್ದರು.

ಬುಧವಾರ ನಡೆದ ವಿಚಾರಣೆ ವೇಳೆ ಕೇಜ್ರಿವಾಲ್ ಪರ ವಕೀಲರು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಮತ್ತೆರಡು ವಾರ ಕಾಲಾವಕಾಶ ಕೇಳಿದರು. ಹೀಗಾಗಿ 2 ವಾರ ಅವಕಾಶ ನೀಡಿದ ಕೋರ್ಟು, ಕಲಾಪದ ವೆಚ್ಚವೆಂದು 10 ಸಾವಿರ ರು. ಠೇವಣಿ ಇಡುವಂತೆ ಸೂಚಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು