ದೇವರ ಮೆರವಣಿಗೆಗಾಗಿ ಏರ್ಪೋರ್ಟ್ ಬಂದ್

Published : Oct 28, 2017, 08:41 PM ISTUpdated : Apr 11, 2018, 12:57 PM IST
ದೇವರ ಮೆರವಣಿಗೆಗಾಗಿ  ಏರ್ಪೋರ್ಟ್ ಬಂದ್

ಸಾರಾಂಶ

ಪದ್ಮನಾಭ ದೇವಾಲಯದ ಪೈನ್​ಕುನಿ ಮತ್ತು ಅಲ್ಪಾಸ್ಸಿ ಉತ್ಸವ 10ನೇ ದಿನವಾದ ಇಂದು ದೇವರ ಮೂರ್ತಿಗಳ ಮೆರವಣಿಗೆ ನಡೆಯಲಿದ್ದು, ಹಾಹಾಗಿ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ.

ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಇವತ್ತು ಪದ್ಮನಾಭ ಸ್ವಾಮಿ ದೇವಸ್ಥಾನದ ದೇವರ ವಿಗ್ರಹಗಳ ‘ಸ್ನಾನ’ ಮಾಡಿಸುವ ಮೆರವಣಿಗೆ ರನ್​ವೇ ಮೂಲಕವೇ ಸಾಗುವ ಕಾರಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಟುವಟಿಕೆಗಳನ್ನು 5 ತಾಸುಗಳ ಕಾಲ ಬಂದ್​ ಮಾಡಲು ಪ್ಲಾನ್​ ಮಾಡಲಾಗಿದೆ. ಪದ್ಮನಾಭ ದೇವಾಲಯದ ಪೈನ್​ಕುನಿ ಮತ್ತು ಅಲ್ಪಾಸ್ಸಿ ಉತ್ಸವ 10ನೇ ದಿನವಾದ ಇಂದು ದೇವರ ಮೂರ್ತಿಗಳ ಮೆರವಣಿಗೆ ನಡೆಯಲಿದ್ದು, ಹಾಹಾಗಿ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ.

ಸಮುದ್ರ ತೀರದಲ್ಲಿ ಧಾರ್ಮಿಕ ಸ್ನಾನಕ್ಕಾಗಿ ತೆರಳುವ ದೇವರಮೂರ್ತಿ ರನ್​ವೇ ಹಾದು ಹೋಗುವವರೆಗೂ ಎರಡು ಪಕ್ಕದಲ್ಲಿ ಭಾರೀ ಬಿಗಿಭದ್ರತೆ ನಿಯೋಜನೆ ಮಾಡಲಾಗಿದೆ. ಶತಮಾನಗಳಿಂದ ಇದೇ ಹಾದಿಯಲ್ಲಿ ಮೆರವಣಿಗೆ ಸಾಗುತ್ತಿರುವ ಹಿನ್ನೆಲೆಯಲ್ಲಿ ಏರ್​​ಫೋರ್ಟ್​​ ನಿರ್ಮಾಣದ ಬಳಿಕವೂ ಅದೇ ಮಾರ್ಗದಲ್ಲಿ ಬರುವ ರನ್​ವೇ  ಮೂಲಕ ಸಾಗುವ ಸಂಪ್ರದಾಯ ಮುಂದುವರೆಸಿಕೊಂಡು ಬರಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?