
ನವದೆಹಲಿ(ಡಿ.21): ವಿಮಾನದ ಲ್ಯಾಂಡಿಂಗ್ ವೇಳೆ ಮಾನವ ತ್ಯಾಜ್ಯವನ್ನ ಮನೆಗಳ ಎಸೆದರೆ ಆ ವಿಮಾನದ ವೈಮಾನಿಕ ಸಂಸ್ಥೆಗೆ 50 ಸಾವಿರ ದಂಡ ವಿಧಿಸುವಂತೆ ಆದೇಶಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತೀರ್ಪು ನೀಡಿದೆ.
ಡಿಜಿಸಿಎಗೆ ಈ ಕುರಿತಂತೆ ಆದೇಶ ನೀಡಿರುವ ಪೀಠ, ಲ್ಯಾಂಡಿಂಗ್ ವೇಳೆ ಟಾಯ್ಲೆಟ್ ಟ್ಯಾಂಕರ್`ಗಳನ್ನ ಓಪನ್ ಮಾಡಿ ಮಾನವ ತ್ಯಾಜ್ಯವನ್ನ ಹೊರಗೆಸೆದ ವಿಮಾನಗಳ ಮಾಲೀಕತ್ವದ ಏರ್`ಲೈನ್ಸ್ ಕಂಪನಿಗೆ ದಂಡ ವಿಧಿಸುವಂತೆ ಆದೇಶಿಸಿದೆ.
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಾಸವಿರುವ ನಿವೃತ್ತ ಸೇನಾಧಿಕಾರಿಯೊಬ್ಬರು` ತಮ್ಮ ಮನೆಗಳ ಮೇಲೆ ವಿಮಾನದಿಂದ ಮಾನವ ತ್ಯಾಜ್ಯ ಬೀಳುತ್ತಿರುವ ಬಗ್ಗೆ ಆರೋಪಿಸಿ ಕೇಸ್ ದಾಖಲಿಸಿದ್ದರು.
ಸಾಮಾನ್ಯವಾಗಿ ವಿಮಾನ ಲ್ಯಾಂಡ್ ಆದ ಬಳಿಕ ಮಾನವ ತ್ಯಾಜ್ಯವನ್ನ ಹೊರಗೆ ಹಾಕಲಾಗುತ್ತದೆ. ಆದರೆ, ಕೆಲವೊಮ್ಮೆ ಲ್ಯಾಂಡಿಂಗ್ ವೇಳೆಗೆ ಟಾಯ್ಲೆಟ್ ಟ್ಯಾಂಕರ್ ಓಪನ್ ಮಾಡಿ ಹೊರಗೆಸೆದ ಬಗ್ಗೆ ವರದಿಗಳಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.