ಬರ್ಮುಡಾ ಟ್ರಯಾಂಗ​ಲ್‌​ನ​ಲ್ಲಿ​ ಗಾಳಿ ಬಾಂಬ್‌!

Published : Oct 23, 2016, 04:43 AM ISTUpdated : Apr 11, 2018, 12:50 PM IST
ಬರ್ಮುಡಾ ಟ್ರಯಾಂಗ​ಲ್‌​ನ​ಲ್ಲಿ​ ಗಾಳಿ ಬಾಂಬ್‌!

ಸಾರಾಂಶ

ಹಡ​ಗು​ಗಳು, ವಿಮಾ​ನ​ಗ​ಳ​ನ್ನು ಆಪೋ​ಶನ ಪಡೆ​ಯು​ತ್ತಿದ್ದ ಕುಳಿಯ ರಹ​ಸ್ಯದ ಬಗ್ಗೆ ವಿಜ್ಞಾ​ನಿ​ಗಳ ಇನ್ನೊಂದು ವಾದ

ನವ​ದೆ​ಹ​ಲಿ (ಅ.23): ಅದು ಅಟ್ಲಾಂಟಿಕ್‌ ಸಾಗ​ರ​ದ ಮಧ್ಯೆ ಇರುವ ದೊಡ್ಡ ತ್ರಿಕೋ​ನಾ​ಕಾ​ರದ ಕುಳಿ. ಅದರ ಮೇಲೆ ಹಾದು​ಹೋ​ಗುವ ಹಡ​ಗು​ಗಳು, ವಿಮಾ​ನ​ಗಳು ಕಣ್ಮ​­ರೆ​­ಯಾ​­ಗು­ತ್ತವೆ. ಅದು ಹೇಗೆ, ಏನು, ಎತ್ತ ಎಂಬುದು ಯಾರಿಗೂ ತಿಳಿ​ದಿ​ಲ್ಲ. 
ವಿಜ್ಞಾನ ಲೋಕಕ್ಕೆ ಅಚ್ಚ​ರಿ​ಯಾ​ಗಿಯೇ ಉಳಿ​ದಿ​ರುವ ಈ ಬರ್ಮುಡಾ ಟ್ರಯಾಂಗ​ಲ್‌ ರಹ​ಸ್ಯದ ಬಗ್ಗೆ ಸಾಕಷ್ಟುಅಧ್ಯ​ಯ​ನ​ಗಳು ನಡೆ​ದಿ​ವೆ​ಯಾ​ದರೂ, ನಿಗೂ​ಢತೆ ಬಯ​­ಲಾ​­ಗಿಲ್ಲ. ಸದ್ಯ ವಿಜ್ಞಾ​ನಿ​ಗಳು ಹೊಸ​ದೊಂದು ಅಧ್ಯ​ಯ​ನ ಕೈಗೊಂಡಿದ್ದು ಇಲ್ಲಿ ಹಡಗು, ವಿಮಾನ ಕಣ್ಮ​ರೆ​ಯಾ​ಗಲು ಗಾಳಿ ಬಾಂಬ್‌ ಕಾರಣ ಎಂದು ಹೇಳಿದೆ! 

ಬರ್ಮುಡಾ ಟ್ರಯಾಂಗಲ್‌ ಕುರಿತು ಅಮೆ​ರಿ​ಕಾದ ವಿಜ್ಞಾ​ನಿ​ಗಳ ತಂಡ ಹೊಸ ವಿಚಾ​ರ​ವೊಂದನ್ನು ಜಗ​ತ್ತಿನ ಎದುರು ಇಟ್ಟಿ​ದ್ದಾರೆ. ಪ್ರತಿ​ಕೂಲ ಹವಾ​ಮಾ​ನ​ದಿಂದಾ​ಗಿ ಈ ತ್ರಿಕೋ­​­ನಾ​ಕಾ​ರದ ಕುಳಿ​ಯಲ್ಲಿ ಷಟ್ಕೋ­ನಾಕಾ​ರ​ದ ಮೋಡಗಳು ಉತ್ಪ​ತ್ತಿ​ಯಾ​ಗು​ತ್ತದೆ. ಈ ಮೋಡ​ಗಳು ಗಂಟೆಗೆ 170 ಮೈಲು ವೇಗ​ದಲ್ಲಿ ಬೀಸಿ ‘ಗಾಳಿ ಬಾಂಬ್‌'­ಗಳನ್ನು ಸೃಷ್ಟಿ​ಸು​ತ್ತವೆ. ಈ ಗಾಳಿಗೆ ಸಮು​ದ್ರ​ದಲ್ಲಿ ಸಂಚ​ರಿ​ಸು​ವ ಹಡ​ಗುಗಳು, ವಿಮಾ​ನ​ಗ​ಳನ್ನೂ ತನ್ನತ್ತ ಸೆಳೆ​ದು​ಕೊ​ಳ್ಳು​ವ ಶಕ್ತಿಯಿರು​ತ್ತದೆ ಎಂದಿದ್ದಾರೆ ವಿಜ್ಞಾ​ನಿ​ಗಳು. ನಾಸಾ ಉಪ​ಗ್ರಹದ ಚಿತ್ರ​ದಲ್ಲಿ ದಾಖ​ಲಾದ 88 ಕಿ.ಮೀ.​ನಷ್ಟುಅಗ​ಲ​ದ ಮೋಡ­​ಗ​ಳನ್ನು ವಿಶ್ಲೇ​ಷಿಸಿ ವಿಜ್ಞಾ​ನಿ​ಗಳು ಈ ಅಭಿ​ಪ್ರಾ​ಯಕ್ಕೆ ಬಂದಿ​ದ್ದಾರೆ. 

ಮೋಡ​ಗಳ ತಳ​ಭಾ​ಗ​ದಲ್ಲಿ ಮೈಕ್ರೋ​ಬರ್ಸ್ಟ್ (ದಿಢೀ​ರನೆ ಗಾಳಿಯ ಪ್ರಬಲ ಪ್ರವ​ಹಿ​ಸು​ವಿ​ಕೆ) ಉಂಟಾಗಿ, ಆ ಗಾಳಿಯ ಸ್ಫೋಟವು ಸಾಗ​ರದ ಮೇಲೆ ಅಪ್ಪ​ಳಿಸಿ, ಬೃಹತ್‌ ಅಲೆ​ಗ​ಳನ್ನು ಸೃಷ್ಟಿ​ಸು​ತ್ತವೆ. ಈ ವೇಳೆ ಕುಳಿ​ಯು ತೆರೆ​ಯ​ಲ್ಪಡುವ ಕಾರಣ, ಹಡ​ಗು​ಗಳು, ವಿಮಾ​ನ​ಗಳು ಅದ​ರೊ​ಳಗೆ ಸೆಳೆ​ಯ​ಲ್ಪ​ಡು​ತ್ತವೆ ಎಂದು ಹವಾ​ಮಾ​ನ​ತಜ್ಞ ರಾರ‍ಯಂಡಿ ಸೆರ್ವೆನಿ ಹೇಳಿ​ರು​ವು​ದಾಗಿ ‘ಸೈನ್ಸ್‌ ಅಲ​ರ್ಟ್‌' ವರದಿ ಮಾಡಿ​ದೆ.

ಕಾಣೆ​ಯಾ​ದ​ವರು ಸಾವಿರ ಮಂದಿ: ಈ ಬರ್ಮುಡಾ ಟ್ರಯಾಂಗ​ಲ್‌​ನಲ್ಲಿ ಈವ​ರೆಗೆ ಸುಮಾ​​ರು 75 ವಿಮಾ​ನ​ಗಳು ಹಾಗೂ ಲೆಕ್ಕಕ್ಕೇ ಸಿಗ​ದಷ್ಟುನೌಕೆ​ಗಳು ನಾಪ​ತ್ತೆ​ಯಾ​ಗಿವೆ. ಇದರ ಕಬಂಧ ಬಾಹು​ಗ​ಳಿಗೆ ಸಿಲು​ಕಿ 100 ವರ್ಷ​ಗ​ಳಲ್ಲಿ ಸಾವಿ​ರರು ಮಂದಿ ಬಲಿ​ಯಾ​ಗಿ​ದ್ದಾರೆ.

ಮಾರ್ಚ್​ನಲ್ಲೂ ನಡೆ​ದಿ​ತ್ತು: ಇದೇ ಮಾದ​ರಿಯ ಸಂಶೋ​ಧ​ನೆ​ಯೊಂದು ಮಾರ್ಚ್​'​ನಲ್ಲೂ ನಡೆ​ದಿತ್ತು. ಸಮು​ದ್ರ​ದಲ್ಲಿ ಅರ್ಧ ಮೈಲು ಅಗ ಲ ಮತ್ತು 150 ಅಡಿ ಆಳ​ದಲ್ಲಿ ಕುಳಿ​ಗ​ಳನ್ನು ಕಂಡಿ​ದ್ದಾ​ಗಿಯೂ, ಈ ಕುಳಿ​ಗಳು ಗಾಳಿಯ ಸ್ಫೋಟ​ದಿಂದ ಸೃಷ್ಟಿ​ಯಾ​ಗಿ​ದ್ದೆಂ​ದೂ, ಇವು​ಗಳೇ ಹಡಗು, ವಿಮಾ​ನ​ಗಳ ನಾಪ​ತ್ತೆಗೆ ಕಾರಣ ಎಂದು ವಿಜ್ಞಾ​ನಿ​ಗಳು ಹೇಳಿ​ದ್ದರು. (ಕೃಪೆ: ಕನ್ನಡಪ್ರಭ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ