ಕಾಂಗ್ರೆಸ್ ಗೆ ಬಿಗ್ ಶಾಕ್ : ಕೈ ಕೊಟ್ಟ ಮತ್ತೊಂದು ಮಿತ್ರ ಪಕ್ಷ

Published : Oct 06, 2018, 03:45 PM ISTUpdated : Oct 06, 2018, 03:56 PM IST
ಕಾಂಗ್ರೆಸ್ ಗೆ ಬಿಗ್ ಶಾಕ್ :  ಕೈ ಕೊಟ್ಟ ಮತ್ತೊಂದು ಮಿತ್ರ ಪಕ್ಷ

ಸಾರಾಂಶ

ಸಮರಕ್ಕೂ ಮುನ್ನವೇ ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಕೆಲ ದಿನಗಳ ಹಿಂದಷ್ಟೇ ಬಹುಜನ ಸಮಾಜವಾದಿ ಪಕ್ಷ ಮುಖಂಡೆ ಕೈ ಎತ್ತಿದ ಬೆನ್ನಲ್ಲೇ ಇದೀಗ ಮತ್ತೊಂದು ಪಕ್ಷ ಕೈ ಕೊಟ್ಟಿದೆ. 

ಲಕ್ನೋ :  ಮಹಾಘಟ ಬಂಧನ ಮೂಲಕ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಯುಪಿಎ ಬಣ ಸಜ್ಜಾಗುತ್ತಿರುವ ಬೆನ್ನಲ್ಲೇ ಬಹುಜನ್ ಸಮಾಜವಾದಿ ನಾಯಕಿ ಮಾಯಾವತಿ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. 

 ಇದೇ ವೇಳೆ ಕಾಂಗ್ರೆಸ್ ಜೊತೆ ಸಮಾಜವಾದಿ ಪಕ್ಷವೂ ಕೈ ಜೋಡಿಸುವುದು ಅನುಮಾನ ಮೂಡಿಸಿದೆ.  ಕಾಂಗ್ರೆಸ್ ನಮ್ಮನ್ನು ಅನೇಕ ದಿನಗಳ ಕಾಲ ಕಾಯುವಂತೆ ಮಾಡಿದ್ದು, ಬಿಎಸ್ ಪಿ ಜೊತೆಗೆ ಮಾತುಕತೆ ನಡೆಸುವುದಾಗಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ. 

ಈ ಮೂಲಕ ಬಹುಜನ್ ಸಮಾಜವಾದಿ ಪಕ್ಷದ ಜೊತೆಗೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. 

2019ನೇ ಸಾಲಿನ  ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳು ಮಾಡಿಕೊಂಡಿರುವ ಮಹಾಘಟಬಂಧನಕ್ಕೆ ಈ ಮೂಲಕ ಹಿನ್ನಡೆ ಎದುರಾಗುವ ಸಾಧ್ಯತೆ ಇದೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!