ಅಭಿಮಾನದ ಅತಿರೇಕ : ಜಯಾ ಅಗಲಿಕೆಗೆ ನೊಂದು 77 ಸಾವು

By Suvarna Web DeskFirst Published Dec 7, 2016, 6:44 PM IST
Highlights

ಸಾವಿಗೀಡಾಗಿರುವಮಂದಿಯಕುಟುಂಬಗಳಿಗೆ3 ಲಕ್ಷಪರಿಹಾರಘೋಷಿಸಲಾಗಿದೆ.

ಸಿಎಂ ಜಯಾ ನಿಧನದ ನಂತರ ದುಃಖ ಮತ್ತು ಆಘಾತ ತಾಳಲಾಗದೆ ಸುಮಾರು 77 ಮಂದಿ ಸಾವಿಗೀಡಾಗಿದ್ದಾರೆ ಎಂದು ಎಐಎಡಿಎಂಕೆ ಬುಧವಾರ ತಿಳಿಸಿದೆ. ಸಾವಿಗೀಡಾಗಿರುವ ಮಂದಿಯ ಕುಟುಂಬಗಳಿಗೆ  3 ಲಕ್ಷ ಪರಿಹಾರ ಘೋಷಿಸಲಾಗಿದೆ. ಅಲ್ಲದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮತ್ತು ಬೆರಳು ಕತ್ತರಿಸಿಕೊಂಡಿದ್ದ ಪಕ್ಷದ ಕಾರ್ಯಕರ್ತರಿಗೆ  50,000 ಪರಿಹಾರ ನೀಡುವುದಾಗಿಯೂ ಪಕ್ಷ ತಿಳಿಸಿದೆ.

ಈ ನಡುವೆ, ಬುಧವಾರವೂ ಜಯಲಲಿತಾ ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸಮಾ ಬಳಿ ಜಮಾಯಿಸಿ ಕಂಬನಿ ಮಿಡಿದರು. ಜತೆಗೆ ನೂರಾರು ಬೆಂಬಲಿಗರು ‘ಅಮ್ಮ’ನ ಅಗಲಿಕೆ ನೋವಿನಲ್ಲಿ ಕೇಶಮಂಡನ ಮಾಡಿಸಿಕೊಂಡರು.

click me!