ಬ್ರೇಕಿಂಗ್: ಸತ್ಯವಾದ ಸಿಎಂ ಭವಿಷ್ಯ, ಬೆಂಗಳೂರಿನ ಹಲವೆಡೆ ಐಟಿ ದಾಳಿ

By Web DeskFirst Published Mar 27, 2019, 11:38 PM IST
Highlights

ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ್ದ ಭವಿಷ್ಯ ನಿಜವಾಗಿದೆ. ನಾಳೆ ಮುಂಜಾನೆ ವೇಳೆಗೆ ಆದಾಯ ತೆರಿಗೆ ದಾಳಿ ನಡೆಯುತ್ತದೆ ಎಂದು ಸಿಎಂ ಹೇಳಿದ್ದರೆ ಬುಧವಾರ ರಾತ್ರಿ ವೇಳೆಗೆ ದಾಳಿ ನಡೆದಿದೆ.

ಬೆಂಗಳೂರು[ಮಾ. 27]  ಬೆಂಗಳೂರಿನ ಹಲವು ಉದ್ಯಮಿಗಳ ಮನೆ ಮೆಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬಸವನಗುಡಿ, ಜಯನಗರದ ಹಲವು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಉದ್ಯಮಿ ಸಿದೀಕ್ ಶೇಟ್ ಮನೆ ಮೇಲೆ ದಾಳಿ ನಡೆದಿದೆ. ಬೆಂಗಳೂರಿನ ನಗರದ ಸೌತ್ ಎಂಡ್ ಸರ್ಕಲ್ ಬಳಿ ಇರೋ ಸಿದೀಕ್ ಸೆಟ್ ಮನೆ ಮೇಲೆ ದಾಳಿಯಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

5 ಜನ ಉದ್ಯಮಿಗಳ ಮೇಲೆ ಐಟಿ ದಾಳಿ ನಡೆದಿದೆ. ಸಿದ್ದಿಕ್ ಸೇಟ್ ಮೂಲತಃ ಜೊಳದ ವ್ಯಾಪಾರಿ ಎಂದು ಹೇಳಲಾಗಿದ್ದು ಮೂರು ಜನ ಅಧಿಕಾರಿಗಳ ತಂಡ ಅನೇಕ ಮಾಹಿತಿ ಕಲೆ ಹಾಕಿ  ತೆರಳಿದೆ.

 

click me!