
ಲಖನೌ(ಜ.07): ಶುಕ್ರವಾರವಷ್ಟೇ ಇಲ್ಲಿನ ಹಜ್ ಭವನದ ಕಾಂಪೌಂಡ್ಗೆ ಕೇಸರಿ ಬಣ್ಣ ಬಳಿದು ವಿವಾದಕ್ಕೆ ಕಾರಣವಾಗಿದ್ದ, ಉತ್ತರಪ್ರದೇಶದ ಯೋಗಿ ಸರ್ಕಾರ, ಶನಿವಾರ, ಕಾಂಪೌಂಡ್ಗೆ ಮತ್ತೆ ಬಿಳಿ ಬಣ್ಣ ಬಳಿದಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಸರ್ಕಾರದ ಅಧಿಕಾರಿಗಳು, ಗೋಡೆಗೆ ಹೆಚ್ಚುವರಿ ಬಣ್ಣ ಬಳಿದಿದ್ದು ಕೇಸರಿ ಬಣ್ಣದ ರೀತಿಯಲ್ಲಿ ಕಾಣುತ್ತಿತ್ತು.
ಆದರೆ ಅದನ್ನು ಇದೀಗ ಬಿಳಿಯ ಬಣ್ಣಕ್ಕೆ ಬದಲಾಯಿಸಲಾಗಿದೆ. ಬಣ್ಣ ಹಚ್ಚುವ ಗುತ್ತಿಗೆ ಪಡೆದಿದ್ದ ವ್ಯಕ್ತಿ, ಸರ್ಕಾರದ ಸೂಚನೆಗೆ ವಿರುದ್ಧವಾಗಿ ಬಣ್ಣ ಬಳಿದು ವಿವಾದಕ್ಕೆ ಕಾರಣನಾ ಗಿದ್ದಾನೆ. ಈ ಕುರಿತು ಆತನಿಗೆ ನೋಟಿಸ್ ನೀಡಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.