ಚಂದ್ರನತ್ತ ಹೋಗಲು ಟಿಕೆಟ್ ಬುಕ್ ಮಾಡ್ಕೊಡಿ: ಆಡೂರು ಗೋಪಾಲ್‌ಕೃಷ್ಣನ್!

Published : Jul 26, 2019, 05:10 PM IST
ಚಂದ್ರನತ್ತ ಹೋಗಲು ಟಿಕೆಟ್ ಬುಕ್ ಮಾಡ್ಕೊಡಿ: ಆಡೂರು ಗೋಪಾಲ್‌ಕೃಷ್ಣನ್!

ಸಾರಾಂಶ

'ಬಿಜೆಪಿ ಟಿಕೆಟ್ ಕೊಟ್ಟರೆ ಚಂದ್ರನಲ್ಲಿ ನೆಲೆಸಲು ಸಿದ್ಧ'| ಪ್ರಸಿದ್ಧ ನಿರ್ದೇಶಕ ಆಡೂರು ಗೋಪಾಲ್‌ಕೃಷ್ಣನ್ ಅಭಿಮತ| ಗುಂಪು ಹತ್ಯೆ ವಿರೋಧಿಸಿ ಪ್ರಧಾನಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ್ದ ಆಡೂರು ಗೋಪಾಲ್‌ಕೃಷ್ಣನ್| ಆಡೂರು ಚಂದ್ರನಲ್ಲಿ ಹೋಗಿ ನೆಲೆಸಲಿ ಎಂದಿದ್ದ ಬಿಜೆಪಿ ವಕ್ತಾರ ಬಿ.ಗೋಪಾಲ್‌ಕೃಷ್ಣನ್| ಟಿಕೆಟ್ ಕೊಟ್ಟರೆ ಚಂದ್ರನಲ್ಲಿ ನೆಲೆಸುವುದಾಗಿ ಹೇಳಿದ ಆಡೂರು ಗೋಪಾಲ್‌ಕೃಷ್ಣನ್|

ತಿರುವನಂತಪುರಂ(ಜು.26): ಬಿಜೆಪಿ ಅವರು ತಮ್ಮನ್ನು ಚಂದ್ರನತ್ತ ಕಳುಹಿಸಲು ಬಯಸಿದ್ದು, ಟಿಕೆಟ್ ಬುಕ್ ಮಾಡಿ ಕೊಟ್ಟರೆ ತಾವು ಹೋಗಲು ಸಿದ್ಧವಿರುವುದಾಗಿ, ಗುಂಪು ಗಲಭೆ ತಡೆಗೆ ಆಗ್ರಹಿಸಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದವರ ಪೈಕಿ ಒಬ್ಬರಾದ ಪ್ರಸಿದ್ಧ ನಿರ್ದೇಶಕ ಆಡೂರು ಗೋಪಾಲ್‌ಕೃಷ್ಣನ್ ಹೇಳಿದ್ದಾರೆ.

ಆಡೂರು ಗೋಪಾಲ್‌ಕೃಷ್ಣನ್ ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಕೇರಳ ರಾಜ್ಯ ಬಿಜೆಪಿ ಘಟಕದ ವಕ್ತಾರ ಬಿ.ಗೋಪಾಲ್‌ಕೃಷ್ಣನ್ , ಆಡೂರು ಚಂದ್ರನಲ್ಲಿ ನೆಲೆಸುವುದು ಒಳಿತು ಎಂದು ಕಿಡಿಕಾರಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಡೂರು ಗೋಪಾಲ್‌ಕೃಷ್ಣನ್, ತಾವು ಇಡೀ ಜಗತ್ತು ಸುತ್ತಿದ್ದು, ಬಿಜೆಪಿ ವಕ್ತಾರ ಟಿಕೆಟ್ ಕೊಡಿಸಿದರೆ ಚಂದ್ರನಲ್ಲಿ ಹೋಗಿ ನೆಲೆಸುವುದಾಗಿ ತಿರುಗೇಟು ನೀಡಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹತ್ಯೆ ತಡೆಗೆ ಕಠಿಣ ಕಾನೂನು ಜಾರಿಗೆ ಆಗ್ರಹಿಸಿ ವಿವಿಧ ಕ್ಷೇತ್ರಗಳ ಸುಮಾರು 49 ಗಣ್ಯರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?