ರೈಲಿನಲ್ಲಿ ಇಲಿ ಬ್ಯಾಗ್ ಕಚ್ಚಿದ್ದಕ್ಕೆ ರೈಲ್ವೆ ಸಚಿವರಿಗೆ ದೂರು ಕೊಟ್ಟ ನಟಿಮಣಿ

Published : Sep 27, 2016, 09:42 PM ISTUpdated : Apr 11, 2018, 12:35 PM IST
ರೈಲಿನಲ್ಲಿ ಇಲಿ ಬ್ಯಾಗ್ ಕಚ್ಚಿದ್ದಕ್ಕೆ ರೈಲ್ವೆ ಸಚಿವರಿಗೆ ದೂರು ಕೊಟ್ಟ ನಟಿಮಣಿ

ಸಾರಾಂಶ

ಟ್ವಿಟರ್‌ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದು, ಇಲಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ

ಮುಂಬೈ(ಸೆ.28): ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಇಲಿಯೊಂದು ತನ್ನ ಬ್ಯಾಗನ್ನು ಕಡಿದುಹಾಕಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಮರಾಠಿ ನಟಿ ನಿವೇದಿತಾ ಸರ್ ದೂರು ನೀಡಿದ್ದಾರೆ. ಟ್ವಿಟರ್‌ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದು, ಇಲಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

‘‘ಸೆ.22ರಂದು ಲಾತೂರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಲಗಿದ್ದಾಗ ತಲೆಯ ಪಕ್ಕದಲ್ಲೆ ಇದ್ದ ಬ್ಯಾಗನ್ನು ಇಲಿ ಕಡಿದುಹಾಕಿದೆ. ಭಯಂಕರ-ಭಾರತೀಯ ರೈಲ್ವೆ- ಸುರೇಶ್‌ಪ್ರಭು,’’ ಎಂದು ಬ್ಯಾಗ್‌ನ ಚಿತ್ರ ಸಮೇತ ಅವರು ಟ್ವೀಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರೈಲ್ವೆ ಸಾರ್ವಜನಿಕ ಸಂಪರ್ಕಾಕಾರಿ, ‘‘ನಿಮ್ಮ ಟ್ವೀಟನ್ನು ದೂರಾಗಿ ಸ್ವೀಕರಿಸಲಾಗುವುದು,’’ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೈಂಗಿಕ ಕಿರುಕುಳದ ಆರೋಪದ ನಂತರ ವಿದ್ಯಾರ್ಥಿ ಸಾವು: 4ನೇ ಮಹಡಿಯಿಂದ ಕೆಳಗೆ ಹಾರಿರುವ ಶಂಕೆ
ಹೊಸ ವರ್ಷದ ರಾತ್ರಿ ಬೆಂಗಳೂರಲ್ಲಿ ಪ್ರಯಾಣಕ್ಕೆ ವಿಶೇಷ ಬಸ್‌ ವ್ಯವಸ್ಥೆ! ಎಲ್ಲಿಂದ? ಎಲ್ಲಿಗೆ?