ಗೂಳಿ ಮೇಲೆ ಆ್ಯಸಿಡ್ ದಾಳಿ?

Published : Oct 31, 2018, 10:19 AM ISTUpdated : Oct 31, 2018, 10:22 AM IST
ಗೂಳಿ ಮೇಲೆ ಆ್ಯಸಿಡ್ ದಾಳಿ?

ಸಾರಾಂಶ

ತುಮಕೂರಿನ ಅರಳೇಪೇಟೆಯಲ್ಲಿ ಗೂಳಿಯೊಂದರ ಮೇಲೆ ಆ್ಯಸಿಡ್ ದಾಳಿಯಾಗಿದೆ ಎಂಬ ಫೋಟೋ ಸಮೇತ ಇರುವ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳು ಈಗ ವೈರಲ್ ಆಗಿವೆ. 

ತುಮಕೂರು (ಅ. 31): ಅರಳೇಪೇಟೆಯಲ್ಲಿ ಗೂಳಿಯೊಂದರ ಮೇಲೆ ಆ್ಯಸಿಡ್ ದಾಳಿಯಾಗಿದೆ ಎಂಬ ಫೋಟೋ ಸಮೇತ ಇರುವ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳು ಈಗ ವೈರಲ್ ಆಗಿವೆ. ಒಂದು ನಿರ್ದಿಷ್ಟ ಸಮುದಾಯವು ಈ ದಾಳಿ ನಡೆಸಿದೆ ಎಂಬ ಪ್ರಚೋದನಕಾರಿ ಬರಹಗಳು ಕೂಡ ಇದರ ಜತೆಗೇ ಹರಿದಾಡುತ್ತಿವೆ.

ಈ ಬಗ್ಗೆ ಆಲ್ಟ್ ನ್ಯೂಸ್ ಎಂಬ ‘ನಿಜ ಪತ್ತೆ’ ಕಾರ್ಯಾಚರಣೆ ನಡೆಸುವ ಆನ್‌ಲೈನ್ ಮಾಧ್ಯಮವು ‘ತನಿಖೆ’ ನಡೆಸಿರುವುದಾಗಿ ಹೇಳಿದೆ. ಗೂಳಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದವರು ಯಾರು? ಈ ಪೋಸ್ಟ್ ಹೇಗೆ ವೈರಲ್ ಆಯಿತು ಎಂಬುದನ್ನು ಪತ್ತೆ ಮಾಡಲು ಯತ್ನಿಸಿದೆ. ಹರೀಶ್ ಕುಮಾರ್ ಎಂಬುವರು ಅಕ್ಟೋಬರ್ 21 ರಂದು ಮೊದಲು ಫೇಸ್‌ಬುಕ್‌ನಲ್ಲಿ ಈ ಪೋಸ್ಟ್ ಪ್ರಕಟಿಸಿದ್ದರು.

ಅವರನ್ನು ಸಂಪರ್ಕಿಸಿದಾಗ, ‘ಗೂಳಿಗೆ ಗಾಯವಾಗಿದ್ದನ್ನು ನಾವು ಗಮನಿಸಿ ಪಶುವೈದ್ಯರ ಹತ್ತಿರ ತೆಗೆದುಕೊಂಡು ಹೋದೆವು. ಆಗ ಅವರು ಇದು ಆ್ಯಸಿಡ್ ಎಂದು ಹೇಳಿದರು’ ಎಂದು ತಿಳಿಸಿದರು. ‘ಈಗ ಗೂಳಿ ಚೇತರಿಸಿಕೊಳ್ಳುತ್ತಿದೆ. ಈ ಕೃತ್ಯ ಯಾರು ಎಸಗಿದರು ಎಂದು ನಮಗೆ ಗೊತ್ತಿಲ್ಲ ಎಂದು ಹರೀಶ್ ಹೇಳಿದರು’ ಎಂದು ‘ಆಲ್ಟ್‌ನ್ಯೂಸ್’ ವರದಿ ಮಾಡಿದೆ.

ಈ ಬಗ್ಗೆ ತುಮಕೂರಿನ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ, ‘ಈ ಬಗ್ಗೆ ದೂರು ದಾಖಲಾಗಿಲ್ಲ’ ಎಂಬ ಉತ್ತರ ಬಂತೆಂದೂ ಅದು ಹೇಳಿದೆ. ಹೀಗಾಗಿ ಒಂದು ನಿರ್ದಿಷ್ಟ ಸಮುದಾಯವು ಈ ಗೂಳಿಯ ಮೇಲೆ ಆ್ಯಸಿಡ್ ದಾಳಿ ಮಾಡಿದೆ ಎಂಬ ಪೋಸ್ಟ್ ಗಳಲ್ಲಿ ಯಾವುದೇ ಹುರುಳಿಲ್ಲ ಎಂದು ‘ಆಲ್ಟ್ ನ್ಯೂಸ್’ ಹೇಳಿಕೊಂಡಿದೆ.

- ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ