
ಲಖನೌ(ಸೆ.29): ಉತ್ತರ ಪ್ರದೇಶದಲ್ಲಿ ಶೀಘ್ರವೇ ನಡೆಯಲಿರುವ ಮುನ್ಸಿಪಲ್ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತದಾನ ಮಾಡುವಂತಿಲ್ಲ.
ಯಾಕೆಂದರೆ, ಲಖನೌನ ಮತದಾರರ ಪಟ್ಟಿಯಿಂದ ವಾಜಪೇಯಿ ಹೆಸರನ್ನು ಕೈಬಿಡಲಾಗಿದೆ. ಲಖನೌನ ಬಾಬು ಬನ್ಸಾರಿ ದಾಸ್ ವಾರ್ಡ್ನ ಮತದಾರರ ಪಟ್ಟಿಯಲ್ಲಿ ವಾಜಪೇಯಿ ಹೆಸರಿತ್ತು. ಈ ವಾರ್ಡ್ನಿಂದ 2004ರ ಲೋಕಸಭೆಯಲ್ಲಿ ವಾಜಪೇಯಿ ಕೊನೆಯದಾಗಿ ಮತದಾನ ಮಾಡಿದ್ದರು ಮತ್ತು ಮುನ್ಸಿಪಲ್ ಚುನಾವಣೆಗೆ 2000ರಲ್ಲಿ ಕೊನೆಯದಾಗಿ ಮತದಾನ ಮಾಡಿದ್ದರು. ಬಳಿಕ ಯಾವುದೇ ಚುನಾವಣೆಯಲ್ಲೂ ಮತಚಲಾವಣೆ ಮಾಡದ ಕಾರಣ, ಇತ್ತೀಚೆಗೆ ಮತದಾರ ಪಟ್ಟಿ ಪರಿಶೀಲನೆಯ ಸಂದರ್ಭ ಹೆಸರು ಕೈಬಿಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.