
ಬೆಂಗಳೂರು (ಮೇ.03): 64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬುಧವಾರ ದಿಲ್ಲಿಯಲ್ಲಿ ಪ್ರದಾನ ಮಾಡಿದರು. ಕನ್ನಡಕ್ಕೆ 6 ಪ್ರಶಸ್ತಿಗಳು ಈ ಬಾರಿ ಸಂದವು.
ಸಂಗೀತ ನಿರ್ದೇಶನ, ಹಿನ್ನೆಲೆ ಸಂಗೀತ, ಮೇಕಪ್ಗಾಗಿ ‘ಅಲ್ಲಮ’ಕ್ಕೆ ಪ್ರಶಸ್ತಿ ಸಂದಿದ್ದು ಸಂಗೀತ ನಿರ್ದೇಶಕ ಬಾಪು ಪದ್ಮನಾಭ ಅವರು ಪ್ರಶಸ್ತಿ ಸ್ವೀಕರಿಸಿದರು. ಅತ್ಯುತ್ತಮ ಪ್ರಾದೇಶಿಕ ಚಿತ್ರ ಎನ್ನಿಸಿಕೊಂಡ ‘ರಿಸರ್ವೇಷನ್’ ಚಿತ್ರದ ನಿರ್ದೇಶಕ ನಿಖಿಲ್ ಮಂಜು, ಅತ್ಯುತ್ತಮ ತುಳು ಪ್ರಾದೇಶಿಕ ಚಿತ್ರ ‘ಮದಿಪು’ ನಿರ್ಮಾಪಕ ಸಂದೀಪ್ಕುಮಾರ್ ನಂದಳಿಕೆ ಗೌರವ ಸ್ವೀಕಾರ ಮಾಡಿದರು. ಇನ್ನು ‘ರೈಲ್ವೆ ಚಿಲ್ಡ್ರನ್’ ಕನ್ನಡ ಚಿತ್ರಕ್ಕಾಗಿ ಮನೋಹರ ಅತ್ಯುತ್ತಮ ಬಾಲನಟ ಪ್ರಶಸ್ತಿ ಸ್ವೀಕರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.