56 ಟನ್ ತೂಕದ ಬ್ರಿಡ್ಜ್ ಮಾಯ: ಕಳ್ಳರ ಕಾಟವಂತೆ ಮಾರಾಯ!

Published : Jun 07, 2019, 02:54 PM IST
56 ಟನ್ ತೂಕದ ಬ್ರಿಡ್ಜ್ ಮಾಯ: ಕಳ್ಳರ ಕಾಟವಂತೆ ಮಾರಾಯ!

ಸಾರಾಂಶ

ಕಬ್ಬಿಣದ ಸೇತುವೆಯನ್ನೇ ಕದ್ದೊಯ್ದ ಖದೀಮರು| ಕಬ್ಬಿಣಕ್ಕಾಗಿ ಸೇತುವೆಯನ್ನೇ ಮುರಿದ ಕಳ್ಳರು| ಉಂಬಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯ ಮಧ್ಯದ ಭಾಗ ಮಾಯ| ಇದು ಕಳ್ಳರ ಕೈಚಳಕ ಅಂತಾರೆ ರಷ್ಯಾದ ಮುರ್ಮಾನಸ್ಕ್ ಗ್ರಾಮದ ಜನತೆ| 56 ಟನ್ ತೂಕದ ಬ್ರಿಡ್ಜ್ ಏಕಾಏಕಿ ಮಾಯವಾಗಿದ್ದು ಹೇಗೆ?|

ಮುರ್ಮಾನಸ್ಕ್(ಜೂ.07): ಏನೋ ರಸ್ತೆ ಬದಿ ಬಿದ್ದ ಇಷ್ಟುದ್ದದ ಕಬ್ಬಣದ ತುಂಡನ್ನು ಹೊತ್ತೊಯ್ದರು ಎಂದರೆ ನಂಬಬಹುದು. ರೈಲು ಹಳಿಗಳ ಮಧ್ಯೆ ಬಿದ್ದಿರುವ ಕಬ್ಬಿಣದ ಕಂಬಿಯನ್ನು ಕದ್ದರು ಎಂದರೆ ಹೌದೆನ್ನಬಹುದು. ಆದರೆ ಬರೋಬ್ಬರಿ 56 ಟನ್ ತೂಕದ ಕಬ್ಬಿಣದ ಸೇತುವೆಯನ್ನೇ ಕಳ್ಳರು ಕದ್ದೊಯ್ದರು ಎಂದರೆ ನಂಬಲು ಸಾಧ್ಯವೇ?.

ಹೌದು ಎನ್ನುತ್ತಾರೆ ರಷ್ಯಾದ ಮುರ್ಮಾನಸ್ಕ್ ಎಂಬ ಗ್ರಾಮದ ಜನರು. ಇಲ್ಲಿ ನಿರ್ಮಿಸಲಾಗಿರುವ 56 ಟನ್ ತೂಕದ ಕಬ್ಬಿಣದ ಸೇತುವೆಯ ಮಧ್ಯದ ಭಾಗ ಮುರಿದಿದ್ದು, ಕಬ್ಬಿಣ ಕಳ್ಳರು ಈ ಸೇತುವೆಯನ್ನು ಮುರಿದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಕುರಿತು ರಷ್ಯಾದ ಸಾಮಾಜಿಕ ಜಾಲತಾಣ VK-a ವರದಿ ಮಾಡಿದ್ದು, 75 ಅಡಿ ಉದ್ದದ ಸೇತುವೆಯ ಮಧ್ಯಭಾಗವನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ ಎಂದು ಹೇಳಿದೆ.

ಮೊದಲು ಸೇತುವೆಯ ಮಧ್ಯಭಾಗವನ್ನು ಕತ್ತರಿಸಿ ಅದನ್ನು ಉಂಬಾ ನದಿಯಲ್ಲಿ ಬಿಟ್ಟು, ಬಳಿಕ ಅದನ್ನು ನದಿಯಿಂದ ಹೊರತೆಗೆದು ಕದ್ದೊಯ್ದಿದ್ದಾರೆ ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
ಗೃಹಲಕ್ಷ್ಮೀ ಯೋಜನೆ ಹಣ ಬಾಕಿ ಇದ್ರೆ ಕೂಡಲೇ ಬಿಡುಗಡೆ: ಸಿಎಂ ಸಿದ್ದರಾಮಯ್ಯ ಭರವಸೆ