ಮಳೆಯಿಂದ ಮೃತಪಟ್ಟವರಿಗೆ ನೌಕರಿ ಜೊತೆಗೆ 5 ಲಕ್ಷ ಪರಿಹಾರ : ಮೇಯರ್

Published : Sep 09, 2017, 03:37 PM ISTUpdated : Apr 11, 2018, 01:10 PM IST
ಮಳೆಯಿಂದ ಮೃತಪಟ್ಟವರಿಗೆ ನೌಕರಿ ಜೊತೆಗೆ  5 ಲಕ್ಷ ಪರಿಹಾರ : ಮೇಯರ್

ಸಾರಾಂಶ

ಸುಂಕದಕಟ್ಟೆ ಬಳಿಯ ಹೇರೋಹಳ್ಳಿ ನಿವಾಸಿಗಳಾದ  ಭಾರತಿ(38) ರಮೇಶ್ (42), ಜಗದೀಶ್(46) ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೊಂದು ಘಟನೆಯಲ್ಲಿ ಶಿವಾನಂದ ಸರ್ಕಲ್ ಬಳಿ ಸ್ಲ್ಯಾಬ್ ಕುಸಿದು ಬೈಕ್ ಸವಾರ ವಯ್ಯಾಲಿ ಕಾವಲ್ ನಿವಾಸಿ ಅರುಣ್(18) ಸಾವನಪ್ಪಿದ್ದರು.

ಬೆಂಗಳೂರು(ಸೆ.09): ಮಳೆಯಿಂದ ಮೃತಪಟ್ಟ ಕುಟುಂಬಕ್ಕೆ ಸರ್ಕಾರಿ ನೌಕರಿ ಜೊತೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ಮೇಯರ್ ಜಿ. ಪದ್ಮಾವತಿ ಸುವರ್ಣ ನ್ಯೂಸ್'ಗೆ ತಿಳಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ನಂತರ  ವಿಷಯ ತಿಳಿಸಿದರು. ನಗರದಲ್ಲಿ  ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಜೆಸಿ ರಸ್ತೆಯ ಮಿನಿರ್ವ ಸರ್ಕಲ್ ಬಳಿ ಕಾರಿನ ಮೇಲ ಮರ ಬಿದ್ದು ಸುಂಕದಕಟ್ಟೆ ಬಳಿಯ ಹೇರೋಹಳ್ಳಿ ನಿವಾಸಿಗಳಾದ  ಭಾರತಿ(38) ರಮೇಶ್ (42), ಜಗದೀಶ್(46) ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೊಂದು ಘಟನೆಯಲ್ಲಿ ಶಿವಾನಂದ ಸರ್ಕಲ್ ಬಳಿ ಸ್ಲ್ಯಾಬ್ ಕುಸಿದು ಬೈಕ್ ಸವಾರ ವಯ್ಯಾಲಿ ಕಾವಲ್ ನಿವಾಸಿ ಅರುಣ್(18) ಸಾವನಪ್ಪಿದ್ದರು. ದಾಖಲೆ ಮಳೆಯಾದ ಕಾರಣ ನೂರಾರು ಮರಗಳು ಧರೆಗುರುಳಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ ‘ಇಯರ್‌ರಿಂಗ್‌’ ಸೃಷ್ಟಿಸಿದ ಕುತೂಹಲ!
ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌ : ನಂಬಿ ಮೋಸಹೋಗದಂತೆ ವಿನಂತಿ