ವಾರಾಂತ್ಯದ 3 ದಿನ ದಿವ್ಯದರ್ಶನ ಇಲ್ಲ!

Published : Jun 30, 2017, 02:12 AM ISTUpdated : Apr 11, 2018, 01:07 PM IST
ವಾರಾಂತ್ಯದ 3 ದಿನ ದಿವ್ಯದರ್ಶನ ಇಲ್ಲ!

ಸಾರಾಂಶ

ಬೇರೆ ಯಾತ್ರಿಕರಿಗೆ ಹೋಲಿಸಿದರೆ ಹೀಗೆ ನಡೆದುಬರುವ ಯಾತ್ರಿಕರಿಗೆ ಬೇಗ ದರ್ಶನ ನೀಡಲಾಗುತ್ತದೆ. ಜೊತೆಗೆ ಒಂದು ಲಡ್ಡು ಉಚಿತವಾಗಿ ನೀಡಲಾಗುತ್ತದೆ. ಇದಕ್ಕೆ ದಿವ್ಯದರ್ಶನ ಎನ್ನುತ್ತಾರೆ

ತಿರುಪತಿ(ಜೂ.30): ನಡಿಗೆಯಲ್ಲಿ ಬಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಬರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಾರಾಂತ್ಯದ ಕಡೆಯ ಮೂರು ದಿನಗಳಲ್ಲಿ ದಿವ್ಯದರ್ಶನ ಸೇವೆ ನಿಲ್ಲಿಸಲು ಟಿಟಿಡಿ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಜುಲೈ 7,8 ಮತ್ತು 9ರಂದು ಈ ಯೋಜನೆ ಜಾರಿಗೊಳ್ಳಲಿದೆ. ಹರಕೆ ತೀರಿಸುವ ಸಲುವಾಗಿ ನಿತ್ಯ 40ರಿಂದ 50000 ಜನ ನಡೆದುಕೊಂಡೇ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಬೇರೆ ಯಾತ್ರಿಕರಿಗೆ ಹೋಲಿಸಿದರೆ ಹೀಗೆ ನಡೆದುಬರುವ ಯಾತ್ರಿಕರಿಗೆ ಬೇಗ ದರ್ಶನ ನೀಡಲಾಗುತ್ತದೆ. ಜೊತೆಗೆ ಒಂದು ಲಡ್ಡು ಉಚಿತವಾಗಿ ನೀಡಲಾಗುತ್ತದೆ. ಇದಕ್ಕೆ ದಿವ್ಯದರ್ಶನ ಎನ್ನುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದಿವ್ಯದರ್ಶನಕ್ಕೆ ಬರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಅವರಿಗೆ ಕಡಿವಾಣ ಹಾಕಲು ಟಿಟಿಡಿ ಮುಂದಾಗಿದೆ. ಇದಕ್ಕಾಗಿ ಪ್ರಾಯೋಗಿಕವಾಗಿ ಜುಲೈ 7,8,9ರಂದು ನಡೆದು ಬರುವವರು ಬೆಟ್ಟದ ಮೇಲೆ ಏರಿದ ಬಳಿಕ ಸಾಮಾನ್ಯ ದರ್ಶನದ ಸಾಲಿನಲ್ಲೇ ನಿಂತು ದರ್ಶನ ಪಡೆಯಬೇಕಾಗುತ್ತದೆ. ಟಿಟಿಡಿಯ ಈ ಹೊಸ ನಿಯಮಕ್ಕೆ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!