ಬೆಳೆಹಾನಿ ಪರಿಹಾರ​: ಆಧಾರ್‌ ಮೂಲಕ ಸಂದಾಯ ವ್ಯವಸ್ಥೆ

Published : Nov 11, 2019, 02:53 PM IST
ಬೆಳೆಹಾನಿ ಪರಿಹಾರ​: ಆಧಾರ್‌ ಮೂಲಕ ಸಂದಾಯ ವ್ಯವಸ್ಥೆ

ಸಾರಾಂಶ

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)ಯು 2018-19 ನೇ ಸಾಲಿನ ಹಿಂಗಾರಿನಲ್ಲಿ ಬರದಿಂದಾಗಿ ಹಾಗೂ ಆಗಸ್ಟ್‌ 2019 ರಲ್ಲಿ ಉಂಟಾದ ಪ್ರವಾಹದಿಂದಾದ ಬೆಳೆ ಹಾನಿಗೆ ಪರಿಹಾರವಾಗಿ ಇನ್‌-ಪುಟ್‌ ಸಬ್ಸಿಡಿಯನ್ನು (ಪರಿಹಾರ ಸಹಾಯ ಧನ) ಫಲಾನುಭವಿ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಆಧಾರ್‌ ಸಂದಾಯ ವ್ಯವಸ್ಥೆ ಮೂಲಕ ಸಂದಾಯ ಮಾಡುತ್ತಿದೆ.  

ಮೈಸೂರು(ನ.11): ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)ಯು 2018-19 ನೇ ಸಾಲಿನ ಹಿಂಗಾರಿನಲ್ಲಿ ಬರದಿಂದಾಗಿ ಹಾಗೂ ಆಗಸ್ಟ್‌ 2019 ರಲ್ಲಿ ಉಂಟಾದ ಪ್ರವಾಹದಿಂದಾದ ಬೆಳೆ ಹಾನಿಗೆ ಪರಿಹಾರವಾಗಿ ಇನ್‌-ಪುಟ್‌ ಸಬ್ಸಿಡಿಯನ್ನು (ಪರಿಹಾರ ಸಹಾಯ ಧನ) ಫಲಾನುಭವಿ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಆಧಾರ್‌ ಸಂದಾಯ ವ್ಯವಸ್ಥೆ ಮೂಲಕ ಸಂದಾಯ ಮಾಡುತ್ತಿದೆ.

ಆಧಾರ್‌ ಸಂಖ್ಯೆಯ ಸಂಯೋಜನೆಯನ್ನು ಖಾತರಿಪಡಿಸಿಕೊಳ್ಳಲು ಹಾಗೂ ಇನ್‌-ಪುಟ್‌ ಸಬ್ಸಿಡಿಯನ್ನು ಶೀಘ್ರವಾಗಿ ಸಂದಾಯ ಮಾಡುವ ಸಲುವಾಗಿ ರೈತರ ಬ್ಯಾಂಕ್‌ ಖಾತೆಗಳಿಗೆ ಒಂದು ರುಪಾಯಿಯನ್ನು ಪ್ರಾಯೋಗಿಕವಾಗಿ ಸಂದಾಯ ಮಾಡಲಾಗುತ್ತಿದೆ.

ಮೈಸೂರು: ಅಯೋಧ್ಯೆ ತೀರ್ಪು ಸ್ವಾಗತಿಸಿ ಸಂಭ್ರಮಿಸಿದ ಹಿಂದೂ ಮುಸ್ಲಿಂ ಬಾಂಧವರು

ಫಲಾನುಭವಿ ರೈತರ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಸಂಯೋಜನೆಗೊಂಡಿರುವುದು ಖಾತರಿಯಾದ ನಂತರ ಎರಡು ಕಚೇರಿ ಕೆಲಸದ ದಿನಗಳಲ್ಲಿ ಇನ್‌-ಪುಟ್‌ ಸಬ್ಸಿಡಿಯ ಸಂಪೂರ್ಣ ಮೊತ್ತವನ್ನು ಸಂಧಾಯ ಮಾಡಲಾಗುವುದು.

ಪ್ರಸ್ತುತ ಸಂಧಾಯ ಮಾಡಲಾಗುತ್ತಿರುವ ಒಂದು ರುಪಾಯಿಯನ್ನು ಪ್ರಾಯೋಗಿಕವಾಗಿ ಮಾತ್ರವೆಂದು ಪುನರುಚ್ಚಿಸಾಲಾಗಿದೆ. ಹೀಗಾಗಿ, ರೈತ ಭಾಂದವರು ಈ ಬಗ್ಗೆ ಯಾವುದೇ ಗೊಂದಲಕ್ಕೆ ಈಡಾಗಬಾರದೆಂದು ಮನವಿ ಮಾಡಿದೆ. ಈ ಸಂಬಂಧ ಯಾವುದೇ ಸಂದೇಹ ಬಂದಲ್ಲಿ ರೈತರು ತಮ್ಮ ತಾಲೂಕು ತಹಸೀಲ್ದಾರರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ತಿಳಿಸಿದ್ದಾರೆ.

ಮಗು ಮಲಗಿರುವಾಗಲೇ ಅಂಗನವಾಡಿ ಬಾಗಿಲು ಹಾಕಿ ತೆರಳಿದ ಶಿಕ್ಷಕಿ

PREV
click me!

Recommended Stories

ಚಾಮರಾಜ ಕ್ಷೇತ್ರಕ್ಕೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ, ಉಪದ್ರ ನೀಡುವ ಜನಪ್ರತಿನಿಧಿ ಬೇಡ, ನಾನು ಆಕ್ಷಾಂಕ್ಷಿ:ಪ್ರತಾಪ್ ಸಿಂಹ
ಸರ್ಕಾರ ಸತ್ತು ಹೋಗಿದೆ, ಸತ್ತ ಆಡಳಿತದ ಹೆಣವನ್ನ ಸಿದ್ದರಾಮಯ್ಯ ಮುಂದೆ, ಡಿಕೆಶಿ ಹಿಂದೆ ಹೊತ್ತಿದ್ದಾರೆ- ಪ್ರತಾಪ್ ಸಿಂಹ