ಬೆಳಗಾವಿ (ಜು.27): ಯುವಕನೊಬ್ಬ ಪ್ರವಾಹದಲ್ಲಿ ಈಜಿಕೊಂಡೆ, ಎಮ್ಮೆಯನ್ನು ದಡ ಸೇರಿಸಿದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಜರುಗಿದೆ.
ಆನಂದ ಎಂಬ ಯುವಕ ಸತ್ತಿ ಗ್ರಾಮದ ನಡುಗಡ್ಡೆ ಪ್ರದೇಶದಿಂದ ಜನರು ದಾಟಿ ಬರುವಾಗ ನೀರಿನ ರಭಸಕ್ಕೆ ಎಮ್ಮೆ ತೇಲಿ ಹೋಗುತ್ತಿತ್ತು. ಆಗ ಈ ಯುವಕ ಜೀವನದ ಹಂಗು ತೊರೆದು ಎಮ್ಮೆ ರಕ್ಷಿಸಿದ್ದಾನೆ.
ರಣಭಯಂಕರ ಪ್ರವಾಹಕ್ಕೆ ತತ್ತರಿಸಿದ ಜನತೆ..!
ನೀರಿನ ರಭಸಕ್ಕೆ ಕೊಚ್ಚಿಹೋದ ರೈತ
ಇನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ರೈತನೊಬ್ಬ ಜಾನುವಾರು ಮತ್ತು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುವಾಗ ಭಾನುವಾರ ಸಂಜೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ರಾಮಗೌಡ ಸಿದ್ದುಗೌಡ ಪಾಟೀಲ (55) ಕೊಚ್ಚಿಕೊಂಡು ಹೋಗಿರುವ ರೈತ. ಈತನಿಗಾಗಿ ಶೋಧ ಕಾರ್ಯದಲ್ಲಿ ವಿಪತ್ತು ನಿರ್ವಹಣಾ ತಂಡದವರು ನಿರತರಾಗಿದ್ದಾರೆ.