ಶಿವಮೊಗ್ಗ: ಸೀಟ್‌ಗಾಗಿ ನಾರಿಯರ ಹೊಡೆದಾಟ, ಠಾಣೆಗೆ ಬಸ್‌ ಕೊಂಡೊಯ್ದ ನಿರ್ವಾಹಕ..!

Published : Jun 02, 2024, 12:00 PM ISTUpdated : Jun 02, 2024, 12:03 PM IST
ಶಿವಮೊಗ್ಗ: ಸೀಟ್‌ಗಾಗಿ ನಾರಿಯರ ಹೊಡೆದಾಟ, ಠಾಣೆಗೆ ಬಸ್‌ ಕೊಂಡೊಯ್ದ ನಿರ್ವಾಹಕ..!

ಸಾರಾಂಶ

ಬಸ್ಸನ್ನು ಠಾಣೆ ಮುಂದೆ ನಿಲ್ಲಿಸಿ ಪೊಲೀಸರನ್ನು ಕರೆದು ನಿರ್ವಾಹಕ ಘಟನೆ ವಿವರಿಸಿದ್ದಾರೆ. ನಾರಿಯರ ಜಗಳ ಬಗೆಹರಿಸಲಾಗದೆ ಹೈರಾಣಾದ ಪೊಲೀಸರು ಕೊನೆಗೆ ಬೇಸತ್ತು ಅವರಿಬ್ಬರನ್ನೂ ಕೆಳಗಿಳಿಸಿ ಬಸ್‌ ಕಳುಹಿಸಿದ್ದಾರೆ.  

ಸಾಗರ(ಜೂ.02):  ಸಾಗರ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಸೀಟಿಗಾಗಿ ನಾರಿಯರಿಬ್ಬರ ನಡುವೆ ಜಗಳ ನಡೆದಿದ್ದು, ಜಗಳ ಬಿಡಿಸಲಾಗದೇ ನಿರ್ವಾಹಕ ಬಸ್ಸನ್ನು ನೇರವಾಗಿ ಸಾಗರಪೇಟೆ ಪೊಲೀಸ್ ಠಾಣೆಗೆ ಕೊಂಡೊಯ್ದ ಘಟನೆ ನಡೆದಿದೆ. 

ಬಸ್ಸನ್ನು ಠಾಣೆ ಮುಂದೆ ನಿಲ್ಲಿಸಿ ಪೊಲೀಸರನ್ನು ಕರೆದು ನಿರ್ವಾಹಕ ಘಟನೆ ವಿವರಿಸಿದ್ದಾರೆ. ನಾರಿಯರ ಜಗಳ ಬಗೆಹರಿಸಲಾಗದೆ ಹೈರಾಣಾದ ಪೊಲೀಸರು ಕೊನೆಗೆ ಬೇಸತ್ತು ಅವರಿಬ್ಬರನ್ನೂ ಕೆಳಗಿಳಿಸಿ ಬಸ್‌ ಕಳುಹಿಸಿದ್ದಾರೆ.

ಡೀಸೆಲ್ ಖಾಲಿಯಾಗಿ ನಡುರಸ್ತೆಯಲ್ಲಿ ನಿಂತ KSRTC ಬಸ್; ಹಿಡಿಶಾಪ ಹಾಕಿದ ಪ್ರಯಾಣಿಕರು!

ಚಿಲ್ಲರೆಗಾಗಿ ಜಗಳ: ಬಸ್‌ ನಿರ್ವಾಹಕ, ಚಾಲಕನ ಮೇಲೆ ಹಲ್ಲೆ: 

ಚಿಲ್ಲರೆ ವಿಚಾರವಾಗಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ ನಿರ್ವಾಹಕ ಹಾಗೂ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿಗೆ ಹೊರಟಿದ್ದ ಬಸ್‌ನಲ್ಲಿ ಪ್ರಯಾಣದ ವೇಳೆ 6 ರು. ಚಿಲ್ಲರೆಗಾಗಿ ನಿರ್ವಾಹಕ ಪ್ರಕಾಶ, ಪ್ರಯಾಣಿಕ ಶಿವರಾಜ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಜಗಳ ಬಿಡಿಸಲು ಬಂದ ಚಾಲಕನ ಮೇಲೂ ಪ್ರಯಾಣಿಕ ಹಲ್ಲೆ ಮಾಡಿದ್ದಾನೆ.

PREV
Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!