ಉತ್ತರ ಕನ್ನಡ: ಅಕ್ಕನ ಮಗಳನ್ನೇ ಕೊಂದ ತಂಗಿ

Kannadaprabha News   | Asianet News
Published : Apr 09, 2020, 12:21 PM IST
ಉತ್ತರ ಕನ್ನಡ: ಅಕ್ಕನ ಮಗಳನ್ನೇ ಕೊಂದ ತಂಗಿ

ಸಾರಾಂಶ

ಅಕ್ಕನ ಮಗಳನ್ನು ತನ್ನ ಮಕ್ಕಳೊಂದಿಗೆ ಪ್ರೀತಿಯಿಂದ ಸಾಕಲಾರದೇ ಅವಳನ್ನು ಸೀರೆಯಿಂದ ಕೊರಳಿಗೆ ಉರುಳುಹಾಕಿ ಕೊಂದ ಅಮಾನವೀಯ ಘಟನೆ ತಾಲೂಕಿನ ತೇರಗಾಂವದಲ್ಲಿ ನಡೆದಿದೆ.

ಉತ್ತರ ಕನ್ನಡ(ಏ.09): ಅಕ್ಕನ ಮಗಳನ್ನು ತನ್ನ ಮಕ್ಕಳೊಂದಿಗೆ ಪ್ರೀತಿಯಿಂದ ಸಾಕಲಾರದೇ ಅವಳನ್ನು ಸೀರೆಯಿಂದ ಕೊರಳಿಗೆ ಉರುಳುಹಾಕಿ ಕೊಂದ ಅಮಾನವೀಯ ಘಟನೆ ತಾಲೂಕಿನ ತೇರಗಾಂವದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೋಮನಿಂಗ ನೆಲ್ಲುಡಿಯ ಪತ್ನಿ 4 ವರ್ಷಗಳ ಹಿಂದೆ ಮೃತಳಾಗಿದ್ದರಿಂದ ಆಕೆಯ 5 ವರ್ಷದ ಶ್ರೀದೇವಿಯೆಂಬ ಮಗುವನ್ನು ಸೋಮನಿಂಗನ ಹೆಂಡತಿಯ ತಂಗಿ ಸಾವಿತ್ರಿ ಉದಯಕುಮಾರ ಮುನವಳ್ಳಿ ಎಂಬವಳು ತನ್ನೊಂದಿಗೆ ತೇರಗಾಂವದ ತನ್ನ ಮನೆಗೆ ಕರೆದುಕೊಂಡು ಬಂದಿದ್ದಳು.

ಭೂಕುಸಿತದಲ್ಲಿ ಪತ್ನಿ ಮಕ್ಕಳನ್ನು ಕಳೆದುಕೊಂಡ ವ್ಯಕ್ತಿ, ವಿಧವೆ ಮರುವಿವಾಹ

ಈಕೆಗೆ 5 ವರ್ಷದ ಹಾಗೂ 3 ವರ್ಷದ ಗಂಡುಮಕ್ಕಳಿದ್ದು ಅವರೊಂದಿಗೆ ಈ ಹುಡುಗಿಯನ್ನೂ ಸಾಕುವುದು ತನಗೆ ಕಿರಿಕಿರಿಯಾಗಿತ್ತು. ಹೀಗಾಗಿ ಶ್ರೀದೇವಿಯನ್ನು ಸೀರೆಯಿಂದ ಕೊರಳಿಗೆ ಉರುಳುಹಾಕಿ ಕೊಲೆಮಾಡುವ ದುಷ್ಕೃತ್ಯವೆಸಗಿದ್ದಾಳೆ. ಸಾವಿತ್ರಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತನಿಖೆ ಮುಂದುವರೆದಿದೆ.

PREV
click me!

Recommended Stories

ಮೈಸೂರು ಬೆಂಗಳೂರು ಎಕ್ಸ್‌‍‌ಪ್ರೆಸ್‌ವೇನಲ್ಲಿ ಪಲ್ಟಿ ಹೊಡೆದ ಎಳನೀರು ವಾಹನ, ಭೀಕರ ದೃಶ್ಯ ಸೆರೆ
ಪೂಜೆಗೆ ಮಚ್ಚೆ ಇಲ್ಲದ ನಗ್ನ ಫೋಟೋ ಕಳ್ಸು ₹30 ಲಕ್ಷ ಕೊಡ್ತೇನೆ, ರಾಮನಗರದಲ್ಲಿ ಮಹಿಳೆಗೆ ಕಿರುಕುಳ