ಬಸ್ ನಿಲ್ದಾಣದಲ್ಲೇ ವಂಚಕನ ಚಳಿ ಬಿಡಿಸಿದ ಯುವತಿ!

Published : Jul 16, 2019, 03:56 PM ISTUpdated : Jul 16, 2019, 07:07 PM IST
ಬಸ್ ನಿಲ್ದಾಣದಲ್ಲೇ  ವಂಚಕನ ಚಳಿ ಬಿಡಿಸಿದ ಯುವತಿ!

ಸಾರಾಂಶ

ಬಸ್ ನಿಲ್ದಾಣದಲ್ಲೇ ವಂಚಕನಿಗೆ ಚಳಿ ಬಿಡಿಸಿದ ಯುವತಿ| ತನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ  ಯುವಕನಿಗೆ ಬಸ್ ನಿಲ್ದಾಣದಲ್ಲಿ  ಚಪ್ಪಲಿ ಏಟು| ನಿಲ್ದಾಣದಲ್ಲೆ  ಸಾರ್ವಜನಿಕರೆದುರು  ಹಿಗ್ಗಾಮುಗ್ಗಾ ಗೂಸಾ.

ದಾವಣಗೆರೆ[ಜು.16]: ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿ ವಂಚಿಸಿದ ಯುವಕನಿಗೆ ಬಸ್ ನಿಲ್ದಾಣದಲ್ಲೇ ಮಹಿಳೆಯೊಬ್ಬಳು ಧರ್ಮದೇಟು ನೀಡಿರುವ ಪ್ರಕರಣ ದಾವಣಗೆರೆಯಲ್ಲಿ ನಡೆದಿದೆ.

"

ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 'ನನ್ನ ತಂಗಿ ಜೀವನ ಹಾಳು ಮಾಡಿದೆ  ನನ್ನ ಅಣ್ಣ ಕೊಲೆ ಮಾಡಿದೆ' ಎಂದು ಆರೋಪಿಸಿದ ಯುವತಿ ಚಪ್ಪಲಿಯಲ್ಲೇ ಯುವಕನೊಬ್ಬನಿಗೆ ಸಾರ್ವಜನಿಕರೆದುರು ಥಳಿಸಿದ್ದಾಳೆ. 

ಏಟು ನೀಡಿದ ಬಳಿಕ ಆಕ್ರೋಶಗೊಂಡ ಯುವತಿ ಪೊಲೀಸರಿಗೆ ದೂರು ನೀಡದೇ ತೆರಳಿದ್ದಾಳೆ. ಬಸ್ ನಿಲ್ದಾಣದಲ್ಲಿ ನಡೆದ ಈ ಪ್ರಹಸನದ 10  ನಿಮಿಷಗದ ವಿಡಿಯೋ ಸದ್ಯ ಸಾಮಾಝಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

PREV
click me!

Recommended Stories

ಬೆಂಗಳೂರು ORR ಇನ್ಮುಂದೆ ಹೈಟೆಕ್: ಬಸ್, ಸೈಕಲ್ ಟ್ರ್ಯಾಕ್ ದೇಶದಲ್ಲೇ ಫಸ್ಟ್ ಡೆಲಿವರಿ ಬಾಯ್ಸ್‌ಗೆ ಅತ್ಯಾಧುನಿಕ 'ಗಿಗ್ ಹಬ್ಸ್‌'
ಕುಮಾರ ಕೃಪಾ ಗೆಸ್ಟ್ ಹೌಸ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್; ಕೊಠಡಿ ಕಾಯ್ದಿರಿಸುವ ಸಾರ್ವಜನಿಕರಿಗೆ ಲಕ್ಷಾಂತರ ವಂಚನೆ!