ರಾಯಚೂರು: ಜಿಲ್ಲಾಧಿಕಾರಿ ಕಚೇರಿ ಸಮೀಪವೇ ವಾಮಾಚಾರ!

Published : Dec 27, 2019, 11:30 AM IST
ರಾಯಚೂರು: ಜಿಲ್ಲಾಧಿಕಾರಿ ಕಚೇರಿ ಸಮೀಪವೇ ವಾಮಾಚಾರ!

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಗೇಟಿನ ಮುಂಭಾಗದಲ್ಲಿರುವ ರಸ್ತೆಯಲ್ಲಿ ವಾಮಾಚಾರ| ಎಳ್ಳು ಅಮವಾಸ್ಯೆ, ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮೂರು ಹಾದಿಯ ಮಾರ್ಗದಲ್ಲಿ ವಾಮಾಚಾರದ ವಸ್ತುಗಳನ್ನು ಇಟ್ಟ ಅಪರಿಚಿತರು| ಡಿಸಿ ಕಚೇರಿ ಗೇಟಿನ ಮುಂಭಾಗದ ಮೂರು ಹಾದಿಯ ರಸ್ತೆ ಮೇಲೆ ಎರಡು ಕಪ್ಪು ಪ್ಲಾಸ್ಟಿಕ್‌ನಲ್ಲಿ ನಿಂಬೆ ಹಣ್ಣು, ಮೊಟ್ಟೆ, ಅರಿಷಿಣ, ಕುಂಕುಮ ಇಟ್ಟ ಅಪರಿಚಿತರು|

ರಾಯಚೂರು(ಡಿ.27): ನಗರದ ಜಿಲ್ಲಾಧಿಕಾರಿ ಕಚೇರಿ ಗೇಟಿನ ಮುಂಭಾಗದಲ್ಲಿರುವ ರಸ್ತೆಯಲ್ಲಿ ವಾಮಾಚಾರ ಮಾಡಿರುವವ ಘಟನೆ ಗುರುವಾರ ನಡೆದಿದೆ. 

ಹೌದು, ಎಳ್ಳು ಅಮವಾಸ್ಯೆ, ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮೂರು ಹಾದಿಯ ಮಾರ್ಗದಲ್ಲಿ ಬುಧವಾರ ರಾತ್ರಿ ಅಪರಿಚಿತರು ವಾಮಾಚಾರದ ವಸ್ತುಗಳನ್ನು ಇಟ್ಟಿದ್ದಾರೆ. ಡಿಸಿ ಕಚೇರಿ ಗೇಟಿನ ಮುಂಭಾಗದ ಮೂರು ಹಾದಿಯ ರಸ್ತೆ ಮೇಲೆ ಎರಡು ಕಪ್ಪು ಪ್ಲಾಸ್ಟಿಕ್‌ನಲ್ಲಿ ನಿಂಬೆ ಹಣ್ಣು, ಮೊಟ್ಟೆ, ಅರಿಷಿಣ, ಕುಂಕುಮವನ್ನು ಇಟ್ಟಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೇರೆ ಕಡೆ ಮಾಟಮಂತ್ರ ಮಾಡಿಸಿ ಈ ಪ್ರದೇಶದಲ್ಲಿ ತಂದು ಹಾಕಿರಬಹುದು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಮುಖ್ಯ ರಸ್ತೆಯಲ್ಲಿಯೇ ವಾಮಾಚಾರದ ವಸ್ತುಗಳನ್ನು ಕಂಡು ವಾಹನ ಸವಾರರು, ಸಾರ್ವಜನಿಕರು ಆತಂಕದಲ್ಲಿ ರಸ್ತೆ ಮೇಲೆ ಸಂಚರಿಸಿದರು.
 

PREV
click me!

Recommended Stories

BPL Card: ಬಿಪಿಎಲ್‌ ಕಾರ್ಡ್‌ ರದ್ದತಿಗೆ ತಾತ್ಕಾಲಿಕ ಸ್ಥಗಿತ! ಆಹಾರ ಸಚಿವ ರಿಜ್ವಾನ್ ಅರ್ಷದ್‌ ಮಹತ್ವದ ಘೋಷಣೆ!
Mohammed Nalapad Wedding: ಕೊಡಗಿನಲ್ಲಿ ಮೊಹಮ್ಮದ್ ನಲಪಾಡ್ ಎರಡನೇ ಮದುವೆ; ಕಾಂಗ್ರೆಸ್ ನಾಯಕನ ಪುತ್ರಿ ಜೊತೆ ಅದ್ದೂರಿ ನಿಕಾಹ್‌!