ಪಾಳು ಬಾವಿಯಲ್ಲಿ ಸ್ಫೋಟ : ಮನೆಯೇ ಛಿದ್ರ

Kannadaprabha News   | Asianet News
Published : Oct 21, 2020, 11:16 AM IST
ಪಾಳು ಬಾವಿಯಲ್ಲಿ ಸ್ಫೋಟ : ಮನೆಯೇ ಛಿದ್ರ

ಸಾರಾಂಶ

ಹಾಳು ಭಾವಿಯಲ್ಲಿನ ಬೆಂಕಿಯಿಂದ ಸ್ಫೋಟವಾಗಿದ್ದು ಗೋಡೆಯು ಛಿದ್ರ ಛಿದ್ರವಾಗಿದೆ. 

ನೆಲಮಂಗಲ (ಅ.21): ಕಸ ತುಂಬಿದ್ದ ಮನೆಯ ಪಾಳುಬಾವಿಗೆ ಯಾರೋ ಮಾಟಮಂತ್ರ ಮಾಡಿಸಿದ್ದಾರೆ ಎಂದು ದಾರಿಹೋಕನೊಬ್ಬ ಹೇಳಿದ ಶಾಸ್ತ್ರ ನಂಬಿ ವ್ಯಕ್ತಿ ಬಾವಿಗೇ ಬೆಂಕಿ ಹಾಕಿದ ಘಟನೆ   ಸಂಭವಿಸಿದೆ. ಈ ವೇಳೆ ಕಸದರಾಶಿಯಲ್ಲಿದ್ದ ಯಾವುದೋ ವಸ್ತು ಸ್ಫೋಟಿಸಿ ಭಾರೀ ಸದ್ದಿನೊಂದಿಗೆ ಬಾವಿಯ ಗೋಡೆ ಛಿದ್ರಗೊಂಡು ಕೆಲಕಾಲ ಆತಂಕ ಸೃಷ್ಟಿಸಿತ್ತು.

ಕಲಬುರಗಿ ಶಾಕಿಂಗ್; ಬಾವಿಯಲ್ಲಿ ಮಹಿಳಾ ಹೆಡ್ ಕಾನ್ಸ್ಟೇಬಲ್ ಶವ ಪತ್ತೆ

ನಗರದ ಬೆಸ್ಕಾಂ ಕಚೇರಿ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಈ ಮನೆಯಲ್ಲಿ ಬಾಡಿಗೆಗಿದ್ದ ಶಿವಶಂಕರ್‌ ಎಂಬಾತ ಮಾಟ-ಮಂತ್ರಕ್ಕೆ ಹೆದರಿ ಬಾವಿಗೆ ಬೆಂಕಿಹಾಕಿದಾತ. 

ಘಟನೆಯಲ್ಲಿ ಶಿವಶಂಕರ್‌ ಹಾಗೂ ಆತನ ತಂಗಿಯ ಮಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!