ಯಾದಗಿರಿ: ಮದುವೆಗೆ ತೆರಳುತ್ತಿದ್ದ ವಾಹನ ಜಪ್ತಿ, ಎದ್ನೋ ಬಿದ್ನೋ ಅಂತ ಓಡಿ ಹೋದ ಬೀಗರು..!

Published : May 24, 2021, 02:33 PM IST
ಯಾದಗಿರಿ: ಮದುವೆಗೆ ತೆರಳುತ್ತಿದ್ದ ವಾಹನ ಜಪ್ತಿ, ಎದ್ನೋ ಬಿದ್ನೋ ಅಂತ ಓಡಿ ಹೋದ ಬೀಗರು..!

ಸಾರಾಂಶ

* ಮದುವೆಗೆ ಜನರನ್ನು ಕರೆದೊಯ್ಯುತ್ತಿದ್ದ ವಾಹನ ಸೀಜ್ * ಮದುವೆಗೆ ಕುರಿ‌ ತುಂಬಿದಂತೆ ಜನರನ್ನ ತುಂಬಿಕೊಂಡು ಹೊರಟಿದ್ದ ವಾಹನ * ಯಾದಗಿರಿ ನಗರದಲ್ಲಿ ನಡೆದ ಘಟನೆ  

ಯಾದಗಿರಿ(ಮೇ.24): ಲಾಕ್‌ಡೌನ್‌ ನಿಯಮಗಳನ್ನ ಗಾಳಿಗೆ ತೂರಿ ಮದುವೆಗೆ ತೆರಳುತ್ತಿದ್ದ ಬುಲೆರೋ ಪಿಕ್ ಅಪ್ ವಾಹನವನ್ನ ಜಪ್ತಿ ಮಾಡಿದ ಘಟನೆ ಇಂದು(ಸೋಮವಾರ) ನಗರದಲ್ಲಿ ನಡೆದಿದೆ. 

ಜನರ ಗುಂಪು ಪ್ರಯಾಣಕ್ಕೆ ನಿಷೇಧ ಇದ್ದರೂ ತೆರೆದ ವಾಹನದಲ್ಲಿ ಕುರಿ ಹಿಂಡಿನಂತೆ ಜನರು ಮದುವೆಗೆ ಹೊರಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಹಾಗೂ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ದಾಳಿ ಮಾಡಿದ್ದಾರೆ. ಮದುವೆಗೆ ಅಂತ ಬುಲೆರೋ ಪಿಕ್ ಅಪ್ ವಾಹನದಲ್ಲಿ ಕಿಕ್ಕಿರಿದು ತುಂಬಿದ್ದ ಜನರು ಯಾದಗಿರಿ ನಗರಕ್ಕೆ ಬಂದಿದ್ದ ವೇಳೆ ಈ ದಾಳಿ ಮಾಡಲಾಗಿದೆ. 

ಯಾದಗಿರಿಯ ಈ ಮದುವೆಗೆ ಕೊರೋನಾ ಭಯವಿಲ್ಲ, ಮಾಸ್ಕ್ ಕೇಳಲೇಬೇಡಿ

ಬಳಿಕ ಜನರ ಸಮೇತ ಠಾಣೆಗೆ ವಾಹನವನ್ನ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ. ಠಾಣೆ ಬಳಿ ವಾಹನ ನಿಲ್ಲುತ್ತಿದ್ದಂತೆ ವಾಹನದಿಂದ ಜಂಪ್ ಮಾಡಿದ ಬೀಗರು ಎದ್ನೋ ಬಿದ್ನೋ ಅಂತ ಓಡಿ ಹೋಗಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ