ಯಾದಗಿರಿ: ಮದುವೆಗೆ ತೆರಳುತ್ತಿದ್ದ ವಾಹನ ಜಪ್ತಿ, ಎದ್ನೋ ಬಿದ್ನೋ ಅಂತ ಓಡಿ ಹೋದ ಬೀಗರು..!

Published : May 24, 2021, 02:33 PM IST
ಯಾದಗಿರಿ: ಮದುವೆಗೆ ತೆರಳುತ್ತಿದ್ದ ವಾಹನ ಜಪ್ತಿ, ಎದ್ನೋ ಬಿದ್ನೋ ಅಂತ ಓಡಿ ಹೋದ ಬೀಗರು..!

ಸಾರಾಂಶ

* ಮದುವೆಗೆ ಜನರನ್ನು ಕರೆದೊಯ್ಯುತ್ತಿದ್ದ ವಾಹನ ಸೀಜ್ * ಮದುವೆಗೆ ಕುರಿ‌ ತುಂಬಿದಂತೆ ಜನರನ್ನ ತುಂಬಿಕೊಂಡು ಹೊರಟಿದ್ದ ವಾಹನ * ಯಾದಗಿರಿ ನಗರದಲ್ಲಿ ನಡೆದ ಘಟನೆ  

ಯಾದಗಿರಿ(ಮೇ.24): ಲಾಕ್‌ಡೌನ್‌ ನಿಯಮಗಳನ್ನ ಗಾಳಿಗೆ ತೂರಿ ಮದುವೆಗೆ ತೆರಳುತ್ತಿದ್ದ ಬುಲೆರೋ ಪಿಕ್ ಅಪ್ ವಾಹನವನ್ನ ಜಪ್ತಿ ಮಾಡಿದ ಘಟನೆ ಇಂದು(ಸೋಮವಾರ) ನಗರದಲ್ಲಿ ನಡೆದಿದೆ. 

ಜನರ ಗುಂಪು ಪ್ರಯಾಣಕ್ಕೆ ನಿಷೇಧ ಇದ್ದರೂ ತೆರೆದ ವಾಹನದಲ್ಲಿ ಕುರಿ ಹಿಂಡಿನಂತೆ ಜನರು ಮದುವೆಗೆ ಹೊರಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಹಾಗೂ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ದಾಳಿ ಮಾಡಿದ್ದಾರೆ. ಮದುವೆಗೆ ಅಂತ ಬುಲೆರೋ ಪಿಕ್ ಅಪ್ ವಾಹನದಲ್ಲಿ ಕಿಕ್ಕಿರಿದು ತುಂಬಿದ್ದ ಜನರು ಯಾದಗಿರಿ ನಗರಕ್ಕೆ ಬಂದಿದ್ದ ವೇಳೆ ಈ ದಾಳಿ ಮಾಡಲಾಗಿದೆ. 

ಯಾದಗಿರಿಯ ಈ ಮದುವೆಗೆ ಕೊರೋನಾ ಭಯವಿಲ್ಲ, ಮಾಸ್ಕ್ ಕೇಳಲೇಬೇಡಿ

ಬಳಿಕ ಜನರ ಸಮೇತ ಠಾಣೆಗೆ ವಾಹನವನ್ನ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ. ಠಾಣೆ ಬಳಿ ವಾಹನ ನಿಲ್ಲುತ್ತಿದ್ದಂತೆ ವಾಹನದಿಂದ ಜಂಪ್ ಮಾಡಿದ ಬೀಗರು ಎದ್ನೋ ಬಿದ್ನೋ ಅಂತ ಓಡಿ ಹೋಗಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

PREV
click me!

Recommended Stories

ಬೇರೆಯವ್ರಿಗೆ ಜ್ಯೋತಿಷ್ಯ ಹೇಳಿ, ತನಗೆ ಭವಿಷ್ಯ ಇಲ್ಲದಂತೆ ಮಾಡ್ಕೊಂಡ ಕಮಲಾಕರ್‌ ಭಟ್‌ ಪತ್ನಿ ಯಾರು? ಮಕ್ಕಳಿದ್ದಾರಾ?
ಕುಡಿದ ಮತ್ತಿನಲ್ಲಿ SSLC ಓದುವ ಮಗಳ ಬ್ಯಾಗ್, ಪುಸ್ತಕ ಸುಟ್ಟ ತಂದೆ, ವಿದ್ಯಾರ್ಥಿನಿಗೆ ಆಸರೆಯಾದ ಖಾಕಿ ಪಡೆ!