ತಹಸೀಲ್ದಾರರ ನಕಲಿ ಸಹಿ ಬಳಸಿ 75 ಲಕ್ಷ ವಂಚನೆ

Kannadaprabha News   | Asianet News
Published : Sep 24, 2020, 08:31 AM IST
ತಹಸೀಲ್ದಾರರ ನಕಲಿ ಸಹಿ ಬಳಸಿ 75 ಲಕ್ಷ ವಂಚನೆ

ಸಾರಾಂಶ

ತಹಸಿಲ್ದಾರರ ನಕಲಿ ಸಹಿ ಬಳಸಿ ಬರೋಬ್ಬರು 75 ಲಕ್ಷ ರು. ವಂಚಿಸಿದ ಘಟನೆಯೊಂದು ನಡೆದಿದೆ. ಏನಿದು ಘಟನೆ ಇಲ್ಲಿದೆ ವಿವರ

ಯಾದಗಿರಿ (ಸೆ.24): ಕೊರೋನಾ ಸಂದರ್ಭದಲ್ಲಿ ವಲಸಿಗರಿಗೆ ವ್ಯವಸ್ಥೆ, ಸೋಂಕಿತರ ಚಿಕಿತ್ಸೆಗೆಂದು ರಾಜ್ಯ ನೈಸರ್ಗಿಕ ವಿಕೋಪದಡಿ ಬಿಡುಗಡೆಯಾಗಿದ್ದ ಅನುದಾನದಲ್ಲಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ .75 ಲಕ್ಷಕ್ಕೂ ಹೆಚ್ಚು ಹಣ ದುರ್ಬಳಕೆಯಾಗಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ.

ಶ್ರೀಮಹಾಲಕ್ಷ್ಮಿ ಎಂಟರ್‌ ಪ್ರೈಸೆಸ್‌ ಹೆಸರಲ್ಲಿ ನೀಡಲಾದ ಚೆಕ್‌ನಲ್ಲಿ ಸುರಪುರ ತಹಸೀಲ್ದಾರರ ನಕಲಿ ಸಹಿ ಬಳಸಿ, ಆ್ಯಕ್ಸಿಸ್‌ ಬ್ಯಾಂಕಿನಿಂದ ಡ್ರಾ ಮಾಡಲಾಗಿದೆ ಎಂದು ಸುರಪುರ ಠಾಣೆಯಲ್ಲಿ ಕಲಂ 419, 420, 465, 468, 472 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ. ಈ ಕುರಿತು, ತಹಸೀಲ್ದಾರ್‌ ನಿಂಗಪ್ಪ ಬಿರಾದರ್‌ ದೂರು ನೀಡಿದ್ದಾರೆ.

ಯಾದಗಿರಿಯಲ್ಲಿ ಭಾರೀ ಮಳೆ: ಗುರುಸಣಗಿ ಬ್ಯಾರೇಜ್‌ನ 4 ಗೋಡೆಗಳು ಜಖಂ ...

ನೈಸರ್ಗಿಕ ವಿಕೋಪದಡಿ ತಹಸೀಲ್ದಾರರ ಖಾತೆಗೆ ಬಿಡುಗಡೆಯಾದ ಹಣದಲ್ಲಿ ವಂಚನೆಯಾಗಿತ್ತು. ಪ್ರಕರಣ ವಂಚನೆ ನಡೆದು 3 ತಿಂಗಳಾದ ನಂತರ ಇದೀಗ ವಂಚನೆ ಬೆಳಕಿಗೆ ಬಂದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿ ಬ್ಯಾಂಕ್‌ ಸಿಬ್ಬಂದಿ ಕೈಚೆಳಕ ಇದರ ಹಿಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

PREV
click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
ಉಡುಪಿ: 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!