ಮಂಗಳಮುಖಿ ಮರ್ಡರ್ : ಜಮೀನಲ್ಲಿ ಪತ್ತೆ ಆಯ್ತು ಆಕೆಯ ಶವ

By Kannadaprabha NewsFirst Published Aug 31, 2020, 12:29 PM IST
Highlights

ಎರಡು ದಿನದ ಹಿಂದೆ ಕಾಣೆಯಾಗಿದ್ದ ಮಂಗಳ ಮುಖಿ ಶವವಾಗಿ ಪತ್ತೆಯಾಗಿದ್ದಾರೆ. ಆದರೆ ಆ ಕೊಲೆಗೆ ಕಾರಣ ಮಾತ್ರ ನಿಗೂಢವಾಗಿದೆ.

ಚಿತ್ರದುರ್ಗ (ಆ.31): ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಮಂಗಳಮುಖಿಯೊಬ್ಬರು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. 

ಚಿತ್ರದುರ್ಗದ ವಾಸಿ ಅಂಜಲಿ (35) ಎಂಬ ಮಂಗಳ ಮುಖಿಯನ್ನು ಕೊಲೆ ಮಾಡಿ ಜಮೀನಿನಲ್ಲಿ ಶವ ಬಿಸಾಡಿ ಹೋಗಲಾಗಿದೆ.  

ಕಲಬುರಗಿ ಶಾಕಿಂಗ್; ಬಾವಿಯಲ್ಲಿ ಮಹಿಳಾ ಹೆಡ್ ಕಾನ್ಸ್ಟೇಬಲ್ ಶವ ಪತ್ತೆ...

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಾಲವ್ವನಹಳ್ಳಿ ಬಳಿಯ ಜಮೀನೊಂದರಲ್ಲಿ ಅಂಜಲಿ ಅವರ ಮೃತದೇಹ ಪತ್ತೆಯಾಗಿದೆ.

ಜಪಾನ್ ಕಾದಂಬರಿ ಓದಿ ಸಹೋದರ-ತಾಯಿಗೆ ಗುಂಡಿಟ್ಟಳು! ನಾಗವಲ್ಲಿ ಕತೆ

 ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ. ಮಂಗಳಮುಖಿಯನ್ನು ಕೊಲೆ ಮಾಡಲು ಯಾವ ಕಾರಣ ಎಂದು ಇನ್ನೂ ತಿಳಿದು ಬಂದಿಲ್ಲ . ಡಿವೈಎಸ್ಪಿ ಪಾಂಡುರಂಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಳ ಮುಖಿಯ ಸಾವಿನ ಸಂಬಂಧ  ಚಿತ್ರದುರ್ಗ ಜಿಲ್ಲೆಯ ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವೀಟ್ ವಾಯ್ಸ್ ಕೇಳಿ ವಿಡಿಯೋ ಕಾಲ್‌ನಲ್ಲಿ ಬೆತ್ತಲಾದವನ ಕತೆ ಏನಾಯ್ತು?...

ಮಂಗಳ ಮುಖಿಯ ಸಾವಿಗೆ ನಿಖರ ಕಾರಣ ತಿಳಿದು ಬಾರದ ಕಾರಣ ತನಿಖೆ ಕೈಗೊಳ್ಳಲಾಗಿದೆ. 

ಈ ಕಾಮಾಂಧನ ಮುಂದೆ ಪಿಶಾಚಿಯೂ ನಾಚಿತು! ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯ

"

click me!