ದಾವಣಗೆರೆ: 1 ಕ್ಟಿಂಟಲ್‌ ಪ್ಲಾಸ್ಟಿಕ್‌ ವಶ, 2 ಸಾವಿರ ದಂಡ

Published : Jul 27, 2019, 01:34 PM IST
ದಾವಣಗೆರೆ: 1 ಕ್ಟಿಂಟಲ್‌ ಪ್ಲಾಸ್ಟಿಕ್‌ ವಶ, 2 ಸಾವಿರ ದಂಡ

ಸಾರಾಂಶ

ದಾವಣಗೆರೆಯ ಚನ್ನಗಿರಿಯಲ್ಲಿ ಪ್ಲಾಸ್ಟಿಕ್‌ ಮಾರಾಟದ ಹೋಲ್‌ಸೇಲ್‌ ಅಂಗಡಿಗಳ ಮೇಲೆ ಪುರಸಭೆ ಮುಖ್ಯಾಧಿಕಾರಿ ಬಸವರಾಜ್‌ ನೇತೃತ್ವದಲ್ಲಿ ದಾಳಿ ಮಾಡಿ 1ಕ್ವಿಂಟಲ್‌ನಷ್ಟುಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿದರು. ಅಂಗಡಿಗಳ ಮಾಲೀಕರಿಗೆ ತಿಳಿವಳಿಕೆಯ ಮಾತಿನಲ್ಲಿ ಎಚ್ಚರಿಕೆ ನೀಡಿದರು.

ದಾವಣಗೆರೆ(ಜು.27): ಚನ್ನಗಿರಿ ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್‌ ಬ್ಯಾಗ್‌, ಥರ್ಮಲ್‌ ಪ್ಲೇಟ್‌, ಪ್ಲಾಸ್ಟಿಕ್‌ ಲೋಟ ಮುಂತಾದವುಗಳನ್ನು ನಿಷೇಧಿಸಿದ್ದು ಅವುಗಳ ಬಳಕೆ ಮತ್ತು ಮಾರಾಟ ಅಪರಾಧವಾಗಿದ್ದು ಇವುಗಳ ಮಾರಾಟ ಈ ಕೂಡಲೇ ನಿಲ್ಲಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜ್‌ ಪಟ್ಟಣದ ಅಂಗಡಿಗಳ ಮಾಲೀಕರಿಗೆ ತಿಳಿವಳಿಕೆ ನೀಡಿದರು.

1 ಕ್ಷಿಂಟಲ್ ಪ್ಲಾಸ್ಟಿಕ್ ವಶ:

ಶುಕ್ರವಾರ ಪಟ್ಟಣದ ಪ್ರಮುಖ ಪ್ಲಾಸ್ಟಿಕ್‌ ಮಾರಾಟದ ಹೋಲ್‌ಸೇಲ್‌ ಅಂಗಡಿಗಳ ಮೇಲೆ ದಾಳಿ ಮಾಡಿ 1ಕ್ವಿಂಟಲ್‌ನಷ್ಟುಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಂಡು ಅಂಗಡಿಗಳ ಮಾಲೀಕರಿಗೆ ತಿಳಿವಳಿಕೆಯ ಮಾತಿನಲ್ಲಿ ಎಚ್ಚರಿಕೆ ನೀಡಿದರು.

ಹಾಸನ: ಪ್ಲಾಸ್ಟಿಕ್‌ ಬಳಸಿದ್ದಕ್ಕೆ ಹಣ್ಣಿನ ಅಂಗಡಿ ತೆರವು

ಈ ಅಂಗಡಿಗಳ ಮೇಲೆ ಪ್ರಥಮ ಬಾರಿಗೆ ದಾಳಿ ನಡೆಸಿದ್ದು 2ನೇ ಬಾರಿ ದಾಳಿ ನಡೆಸುವ ಸಂದರ್ಭದಲ್ಲಿ ಪ್ಲಾಸ್ಟಿಕ್‌ ಉತ್ಫನ್ನಗಳು ದೊರೆತರೆ ದುಪ್ಪಟ್ಟು ದಂಡ ವಿಧಿಸುವ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

2 ಸಾವಿರ ದಂಡ ವಸೂಲಿ:

4ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿಕೊಂಡು 2 ಸಾವಿರ ರೂ. ದಂಡ ವಸೂಲಿ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಪರಿಸರ ಅಭಿಯಂತರ ತಿಮ್ಮಪ್ಪ, ಪೌರಕಾರ್ಮಿಕ ನಿಂಗಪ್ಪ, ಲಿಂಗರಾಜ್‌ ಇತರರು ಇದ್ದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ತೀರ್ಥಹಳ್ಳಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಭೀಕರ ಡಿಕ್ಕಿ; ಶೃಂಗೇರಿಯ ಒಂದೇ ಕುಟುಂಬದ ನಾಲ್ವರ ಸಾವು!
ಶಾಲೆಯಲ್ಲೇ ಅತಿಥಿ ಶಿಕ್ಷಕ-SDMC ಅಧ್ಯಕ್ಷರ ಬಡಿದಾಟ; ಮಾದರಿ ಶಾಲೆಯಲ್ಲಿ 'ಪುಂಡರ' ವರ್ತನೆ, ವಿಡಿಯೋ ವೈರಲ್!